ADVERTISEMENT

ಬೆಳಗಾವಿ ಅಧಿವೇಶನ: ಸುವರ್ಣ ವಿಧಾನಸೌಧ ಪರಿಶೀಲಿಸಿದ ಎಡಿಜಿಪಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 13:55 IST
Last Updated 17 ನವೆಂಬರ್ 2021, 13:55 IST
ಬೆಳಗಾವಿ ಅಧಿವೇಶನ: ಸುವರ್ಣ ವಿಧಾನಸೌಧ ಪರಿಶೀಲಿಸಿದ ಎಡಿಜಿಪಿ
ಬೆಳಗಾವಿ ಅಧಿವೇಶನ: ಸುವರ್ಣ ವಿಧಾನಸೌಧ ಪರಿಶೀಲಿಸಿದ ಎಡಿಜಿಪಿ   

ಬೆಳಗಾವಿ: ಮುಂಬರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ ರೆಡ್ಡಿ ಅವರು ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಅಧಿವೇಶನ ನಡೆಯುವ ಸ್ಥಳ, ಹೊರಾಂಗಣ, ಮುಖ್ಯಮಂತ್ರಿ ಮತ್ತು ಸಚಿವರ ಕಚೇರಿಗಳ ಭದ್ರತೆ ಬಗ್ಗೆ ಮಾಹಿತಿ ಪಡೆದರು. ಪ್ರತಿಭಟನೆಗೆ ಎಲ್ಲೆಲ್ಲಿ ಜಾಗ ಒದಗಿಸಲಾಗುತ್ತದೆ ಎನ್ನುವುದನ್ನು ತಿಳಿದುಕೊಂಡರು.

ಅಧಿವೇಶನ ಮುಗಿಯುವವರೆಗೆ ನಗರ ಮತ್ತು ಸುವರ್ಣ ವಿಧಾನಸೌಧದ ಸುತ್ತಮುತ್ತ ಎಷ್ಟು ಪೊಲೀಸರನ್ನು ನಿಯೋಜಿಸಬೇಕಾಗುತ್ತದೆ ಎಂಬಿತ್ಯಾದಿ ಮಾಹಿತಿ ಪಡೆದರು.

ADVERTISEMENT

ಉತ್ತರ ವಲಯ ಐಜಿಪಿ ಸತೀಶ್‌ಕುಮಾರ್, ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿಗಳಾದ ವಿಕ್ರಂ ಅಮಟೆ ಹಾಗೂ ಪಿ.ವಿ. ಸ್ನೇಹಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.