ಬೆಂಗಳೂರು: ಈ ದೇಶ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಮುಂದುವರಿಯಬೇಕು. ಇದಕ್ಕೆ ಮುಸ್ಲಿಮರು ಪೂರ್ಣ ಮನಸ್ಸಿನಿಂದ ಬೆಂಬಲ ನೀಡಬೇಕು ಎಂದು ಅನರ್ಹ ಶಾಸಕ ಆರ್.ರೋಷನ್ ಬೇಗ್ ಹೇಳಿದ್ದಾರೆ.
ಶಿವಾಜಿನಗರದ ರಸೆಲ್ ಮಾರ್ಕೆಟ್ ಬಳಿ ಸೋಮವಾರ ಬಿಜೆಪಿ ಚುನಾವಣಾ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಬಿಜೆಪಿ ಜತೆಯಲ್ಲಿ ಸಾಗಲು ಮುಸ್ಲಿಮರು ಹಿಂದೇಟು ಹಾಕಬಾರದು. ನಾವೇ ಬೇರೆ ಅನ್ನುವಸಂದೇಶ ಹೋಗಬಾರದು. ನಮ್ಮನ್ನು ಓಲೈಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವ ದಿನಗಳು ಮುಗಿದು ಹೋಯಿತು’ ಎಂದು ಅವರು ಹೇಳಿದರು.
‘ಶಿವಾಜಿನಗರ ಛೋಟಾ ಹಿಂದೂಸ್ಥಾನ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತರು ಸೇರಿದಂತೆ ಎಲ್ಲರೂ ಇದ್ದಾರೆ. ಎಲ್ಲರೂ ಒಗ್ಗಟ್ಟಾಗಿಯೇ ಮುನ್ನಡೆಯಬೇಕು. ಇದರಿಂದ ದೇಶವೂ ಮುನ್ನಡೆಯಲು ಸಾಧ್ಯ. ನಾವೂ ದೇಶದ ಅಭಿವೃದ್ಧಿ ಬಯಸುತ್ತೇವೆ. ದೇಶದ ಅಭಿವೃದ್ಧಿಗಾಗಿ ಭಾರತ ಸರ್ಕಾರ ಮತ್ತು ಮೋದಿಯವರ ಜತೆಗಿರುತ್ತೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.