ADVERTISEMENT

ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಸಾರಿಗೆ ನೌಕರರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 7:57 IST
Last Updated 8 ಏಪ್ರಿಲ್ 2021, 7:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ರಾಜ್ಯದ ಎಲ್ಲ ಸಾರಿಗೆ ನಿಗಮಗಳ ಕಾಯಂ ನೌಕರರಿಗೆ ಗುರುವಾರ ಸೂಚನೆ ನೀಡಲಾಗಿದೆ.

ತರಬೇತಿಯಲ್ಲಿರುವ ಸಿಬ್ಬಂದಿಗೆ ಬುಧವಾರ ರಾತ್ರಿ ನೋಟಿಸ್ ಜಾರಿ ಮಾಡಲಾಗಿತ್ತು. ಕಾಯಂ ಸಿಬ್ಬಂದಿಗೆ ಗುರುವಾರ ಬೆಳಿಗ್ಗೆ ಎಸ್ಎಂಎಸ್ ಮೂಲಕ ಸೂಚನೆ ರವಾನಿಸಲಾಗಿದೆ.

'ಸಂಜೆಯವರೆಗೂ ಕಾದು ನೋಡಲಾಗುವುದು. ನಂತರ ಕರ್ತವ್ಯಕ್ಕೆ ಗೈರಾಗಿರುವ ನೌಕರರಿಗೆ ನೋಟಿಸ್ ಜಾರಿ ಮಾಡುವ ಕುರಿತು ನಿರ್ಧಾರಕ್ಕೆ ಬರಲಾಗುವುದು' ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.