ಬೆಂಗಳೂರು: ‘ಚುನಾವಣೆಯ ಸಂದರ್ಭದಲ್ಲಿ ನಾನಾ ವೇಷ ಧರಿಸುವ ಟ್ವಿಟರ್ ಟ್ರೋಲ್ ಖ್ಯಾತಿಯ ರಾಹುಲ್ ಗಾಂಧಿಯವರಿಗೆ ಈಗ ಧರ್ಮದ ನೆನಪಾಗಿದೆ’ ಎಂದು ಬಿಜೆಪಿ ಟೀಕಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಹುಲ್ ಗಾಂಧಿ ಅವರು ಒಮ್ಮೆ ಜನಿವಾರಧಾರಿ ಎನ್ನುತ್ತಾರೆ. ಮತ್ತೊಮ್ಮೆ ಕಾಶ್ಮೀರಿ ಪಂಡಿತ ಎನ್ನುತ್ತಾರೆ. ಕುಟುಂಬದ ಮೂಲಕ್ಕೂ ರಾಹುಲ್ ಹೇಳಿಕೆಗೂ ಯಾವುದೇ ಸಾಮ್ಯತೆಯಿಲ್ಲ’ ಎಂದು ವ್ಯಂಗ್ಯವಾಡಿದೆ.
‘ದೇಶದ ಉದ್ಯಮ ರಂಗಕ್ಕೆ ಚೇತರಿಕೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಅನೇಕ ಉಪಕ್ರಮಗಳನ್ನು ಪ್ರಕಟಿಸಿದೆ. ಡ್ರೋನ್ ಉದ್ಯಮ, ವಾಹನ ಬಿಡಿಭಾಗ ಉದ್ಯಮಕ್ಕೆ ಪ್ರೋತ್ಸಾಹ, ಟೆಲಿಕಾಂ ರಂಗದಲ್ಲಿ ಶೇ. 100 ರಷ್ಟು ಎಫ್ಡಿಐ, ಆಟೋಮೊಬೈಲ್ ಕ್ಷೇತ್ರದಲ್ಲಿ 7.5 ಲಕ್ಷ ಉದ್ಯೋಗ ಸೃಷ್ಟಿಸಿದೆ’ ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.