ಬೆಂಗಳೂರು:‘ಭ್ರಷ್ಟಾಚಾರದ ಮೂಲವೇ ಆಲೋಚನೆ. ಕ್ರಿಯೆ ನಮ್ಮನ್ನು ಭ್ರಷ್ಟರನ್ನಾಗಿ ಮಾಡಿದೆ. ಇದಕ್ಕೆ ಒತ್ತಡಗಳೂ ಕಾರಣ ಆಗಬಹುದು. ಭ್ರಷ್ಟಾಚಾರ ರಹಿತವಾಗಿ ಬದುಕುವುದು ಅಷ್ಟೊಂದು ಸುಲಭವಲ್ಲ. ಭ್ರಷ್ಟಾಚಾರ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪರೋಕ್ಷವಾಗಿ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡರು.
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಮಠದಲ್ಲಿ ಶನಿವಾರ ನಡೆದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾವು (ರಾಜಕಾರಣಿ) ಕೆಡುತ್ತಿಲ್ಲ; ವ್ಯವಸ್ಥೆ ನಮ್ಮನ್ನು ಕೆಡಿಸುತ್ತಿದೆ. ವ್ಯವಸ್ಥೆ ಕೆಡಬಾರದೆಂದು ನೀವು (ಮತದಾರ) ಮನಸ್ಸು ಮಾಡಿದರೆ ನಾವು ಕೆಡಬೇಕಾದ ಅಗತ್ಯವಿಲ್ಲ. ಸ್ವಂತಕ್ಕೆ ಒಂದಷ್ಟು ಜಾಸ್ತಿ ಬೇಕು ಎಂಬ ಆಲೋಚನೆ ಬರುವುದು ಸಹಜ. ಇಂತಹ ಮನಸ್ಥಿತಿಗೆ ನಮ್ಮನ್ನು ತಳ್ಳಬೇಡಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.