ADVERTISEMENT

ಶಿವಮೊಗ್ಗ, ಕೊಡಗಿನಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 19:31 IST
Last Updated 21 ಸೆಪ್ಟೆಂಬರ್ 2020, 19:31 IST
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಬಳಿ ಭತ್ತ ಮತ್ತು ಅಡಿಕೆ ಬೆಳೆ ಜಲಾವೃತವಾಗಿದ್ದು, ಮುಳುಗಡೆಯಾಗಿದ್ದ ಪಂಪ್‌ಸೆಟ್‌ ವೈರ್‌ ಅನ್ನು ರೈತರು ತೆಪ್ಪದ ಮೂಲಕ ಹೊರತಂದರು ಪ್ರಜಾವಾಣಿ ಚಿತ್ರ: ಎಸ್‌.ಎಸ್‌. ನಾಯಕ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಬಳಿ ಭತ್ತ ಮತ್ತು ಅಡಿಕೆ ಬೆಳೆ ಜಲಾವೃತವಾಗಿದ್ದು, ಮುಳುಗಡೆಯಾಗಿದ್ದ ಪಂಪ್‌ಸೆಟ್‌ ವೈರ್‌ ಅನ್ನು ರೈತರು ತೆಪ್ಪದ ಮೂಲಕ ಹೊರತಂದರು ಪ್ರಜಾವಾಣಿ ಚಿತ್ರ: ಎಸ್‌.ಎಸ್‌. ನಾಯಕ   

ಬೆಂಗಳೂರು: ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಜನಜೀವನನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ರಾಜ್ಯದ ಉಳಿದ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 26.8 ಸೆಂ.ಮೀ. ಮಳೆ ಸುರಿದಿದೆ.ಶರಾವತಿ ಕೊಳ್ಳದ ಜೋಗದ ಕೆಪಿಸಿ ವಸಾಹತು ಪ್ರದೇಶದಲ್ಲಿರುವ ಪುರಾತನ ವಸತಿಗೃಹಗಳ ಮುಂಭಾಗದಲ್ಲಿ ಗುಡ್ಡ ಕುಸಿದಿದೆ.

ಭದ್ರಾ ಮತ್ತು ತುಂಗಾ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ತುಂಗಭದ್ರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೋಣನತಂಬಿಗಿ-ನಿಟ್ಟೂರು ಕ್ರಾಸ್ ಸಮೀಪದ ತುಂಗಭದ್ರಾ ನದಿ ನೀರಿನಲ್ಲಿ ಇಬ್ಬರು ಯುವಕರು ಎರಡು ಎತ್ತುಗಳೊಂದಿಗೆ ನೀರು ಪಾಲಾಗಿದ್ದಾರೆ. ಹೊಸಪೇಟೆ ಬಳಿಯ ಹಂಪಿ ಸ್ಮಾರಕಗಳು ಜಲಾವೃತಗೊಂಡಿವೆ.

ADVERTISEMENT

ಕೊಡಗು ಜಿಲ್ಲೆಯಲ್ಲಿ ಮತ್ತೆ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.