ಬೆಂಗಳೂರು: ‘ಪ್ರಜಾಪ್ರಭುತ್ವವ್ಯವಸ್ಥೆಯನ್ನೇ ಧಿಕ್ಕರಿಸಿ ಮಾತನಾಡಿರುವಆರ್ಎಸ್ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪ್ರಜಾಪ್ರಭುತ್ವದಭದ್ರ ಬುನಾದಿಯ ಮೇಲೆ ಸರ್ಕಾರಗಳು ರಚನೆಯಾಗುತ್ತವೆ ಎನ್ನುವುದನ್ನು ಮರೆತಂತಿದೆ’ ಎಂದು ಕೆಪಿಸಿಸಿ ವಕ್ತಾರ ಮೆಹಬೂಬ್ ಪಾಷ ಹೇಳಿದ್ದಾರೆ.
‘ಪ್ರಜಾವಾಣಿ’ ಸಂದರ್ಶನದಲ್ಲಿ ಹೊಸಬಾಳೆ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಟೀಕಿಸಿರುವ ಪಾಷ, ‘ಹೊಸಬಾಳೆ ಅವರಿಗೆ ಸಾಮಾನ್ಯ ಜ್ಞಾನದ ಕೊರತೆ ಇರುವಂತೆಯೂ ಕಾಣುತ್ತಿದೆ’ ಎಂದಿದ್ದಾರೆ.
‘ದೇಶಕ್ಕೆ ಮಾರಕವಾದ ಘಟನೆಗಳು ನಡೆದಾಗ ವಿರೋಧ ಪಕ್ಷಗಳ ಒಗ್ಗಟ್ಟು ಅವಶ್ಯ. ಅಂತಹ ಸನ್ನಿವೇಶ ಬಿಟ್ಟು ದೇಶದೊಳಗೆ ಧರ್ಮಗಳ ಅಂತರ ಹೆಚ್ಚಿದಾಗ ಅಥವಾ ನಿರ್ಗತಿಕರು, ವಲಸೆ ಕಾರ್ಮಿಕರು, ರೈತರು, ಬಡ ಕೂಲಿ ಕಾರ್ಮಿಕರು ನಿಕೃಷ್ಟ ಸ್ಥಿತಿಯಲ್ಲಿದ್ದಾಗ ಅವರ ಪರ ನಿಲ್ಲದ ಸರ್ಕಾರವು ವಿರೋಧ ಪಕ್ಷಗಳಿಂದ ಬೆಂಬಲ ನಿರೀಕ್ಷಿಸುವುದು ಎಷ್ಟು ಸರಿ’ ಎಂದೂ ಅವರು ಪ್ರಶ್ನಿಸಿದ್ದಾರೆ.
‘ಯಾವುದೇ ಸರ್ಕಾರ, ಜನಪರ ಸರ್ಕಾರ ಆಗಬೇಕೇ ಹೊರತು, ಧರ್ಮಧಾರಿತ ಚಟುವಟಿಕೆಯ ಕೇಂದ್ರ ಆಗಬಾರದು. ಆರ್ಎಸ್ಎಸ್ ಬಿಜೆಪಿಯ ಅಂಗ. ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಎತ್ತಿಹಿಡಿಯುವ ರಾಜಕೀಯೇತರ ಸಂಘಟನೆಗಳು ಸಾಕಷ್ಟಿದ್ದು, ಹಲವು ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡುತ್ತಿವೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.