ಧರ್ಮಸ್ಥಳ: 'ಹನ್ನೆರಡು ವರ್ಷಗಳ ಹಿಂದೆ ರಾಜಕೀಯ ವಿಚಾರಕ್ಕೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಹೆಸರನ್ನು ಎಳೆದು ತಂದು ನಾವು ಅಪಚಾರ ಮಾಡಿದ್ದೇವೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಧರ್ಮಸ್ಥಳ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಪ್ರಯುಕ್ತ ಹಮ್ಮಿಕೊಂಡಿರುವ ಕೆರೆ ಸಂಜೀವಿನಿ ಯೋಜನೆಯನ್ನು ಶನಿವಾರ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
'ಹಿಂದೆ ನಮ್ಮಿಂದ ತಪ್ಪಾಗಿದೆ. ರಾಜಕೀಯ ಕಾರಣಕ್ಕೆ ಸ್ವಾಮಿಯ ಹೆಸರನ್ನು ಎಳೆದು ತಂದೆವು. ಅಪಚಾರ ಮಾಡಿದರೆ ಸ್ವಾಮಿ ಯಾರನ್ನೂ ಬಿಡುವುದಿಲ್ಲ ಎಂಬ ಅರಿವಾಗಿದೆ. ಈ ತಪ್ಪಿನ ನೋವು ಯಾವತ್ತೂ ಮರೆತುಹೋಗುವುದಿಲ್ಲ' ಎಂದರು.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.