ADVERTISEMENT

ಆನ್‌ಲೈನ್‌ನಲ್ಲೇ ಸಾಹಿತ್ಯ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 21:20 IST
Last Updated 18 ಜೂನ್ 2020, 21:20 IST

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್ ಮೂಲಕವೇ ಕಾರ್ಯಚಟುವಟಿಕೆ ನಡೆಸಿದಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕ ಘಟಕವು ರಾಜ್ಯದಲ್ಲಿ 51 ಘಟಕಗಳಿಗೆ ಚಾಲನೆ ನೀಡಿದೆ.

ಪರಿಷದ್‌ನ ಕರ್ನಾಟಕ ಘಟಕ2015ರಲ್ಲಿ ಕಾರ್ಯ ಆರಂಭಿಸಿದೆ. ಲಾಕ್‌ಡೌನ್ ಅವಧಿಯಲ್ಲೇ 50 ಘಟಕಗಳನ್ನು ಆರಂಭಿಸಲಾಗಿದ್ದು, ಒಟ್ಟು 100 ಘಟಕಗಳು ರಾಷ್ಟ್ರೀಯ ಸಾಹಿತ್ಯ ಪ್ರಚಾರದಲ್ಲಿ ತೊಡಗಿಕೊಂಡಿವೆ. ಕನ್ನಡದ ಮೊದಲ ಶಾಸನ ದೊರೆತ ಹಲ್ಮಿಡಿಯಲ್ಲಿ 101ನೇ ಘಟಕ ಶನಿವಾರ ಉದ್ಘಾಟನೆಗೊಳ್ಳಲಿದೆ.

‘ಲಾಕ್‌ಡೌನ್ ಸಂದರ್ಭದಲ್ಲಿಸಂಪನ್ಮೂಲ ವ್ಯಕ್ತಿಗಳಿಂದ ವೆಬಿನಾರ್‌ ಮೂಲಕ ಅಭ್ಯಾಸ ವರ್ಗ ನಡೆಸಲಾಗಿದೆ. ರಾಷ್ಟ್ರೀಯ ಸಾಹಿತ್ಯದ ಸೃಷ್ಟಿ ಮತ್ತು ಪ್ರಚಾರ, ಸಾಹಿತ್ಯದ ಕಾರ್ಯಕರ್ತರ ಕಾರ್ಯವೈಖರಿ ಏನು ಎಂಬುದನ್ನು ಅಭ್ಯಾಸ ವರ್ಗದಲ್ಲಿ ತಿಳಿಸಲಾಗುತ್ತದೆ’ ಎಂದು ಪರಿಷದ್‌ನ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.