ಚಿತ್ರಗಳಲ್ಲಿ ನೋಡಿ: ಸೆರೆಸಿಕ್ಕ ನಂಜನಗೂಡು ನರಭಕ್ಷಕ ಹುಲಿ!
ಹೆಡಿಯಾಲ ಅರಣ್ಯ ವಲಯದ ಬಳ್ಳೂರುಹುಂಡಿಯ ಕಲ್ಲಹಾರಖಂಡಿ ಎಂಬಲ್ಲಿ ಬೋನಿಗೆ ಬಿದ್ದ 10 ವರ್ಷದ ಗಂಡು ಹುಲಿ
ಪ್ರಜಾವಾಣಿ ವೆಬ್ ಡೆಸ್ಕ್
Published 28 ನವೆಂಬರ್ 2023, 5:35 IST
Last Updated 28 ನವೆಂಬರ್ 2023, 5:35 IST
ನಂಜನಗೂಡು ತಾಲ್ಲೂಕಿನ ಹೆಡಿಯಾಲ ಅರಣ್ಯ ವಲಯದ ಬಳ್ಳೂರುಹುಂಡಿಯಲ್ಲಿ ಮಹಿಳೆ ಕೊಂದಿದ್ದ 10 ವರ್ಷದ ಗಂಡು ಹುಲಿ ಮಂಗಳವಾರ ಮುಂಜಾನೆ ಸೆರೆಯಾಗಿದೆ.
-ಪ್ರಜಾವಾಣಿ ಚಿತ್ರ
ಬಳ್ಳೂರುಹುಂಡಿ ಗ್ರಾಮದ ಕಲ್ಲಹಾರಖಂಡಿ ಎಂಬ ಸ್ಥಳದಲ್ಲಿ ಹಸುವಿನ ಕಳೇಬರ ತಿನ್ನಲು ಬಂದಾಗ ಅರಿವಳಿಕೆ ತಜ್ಞ ಡಾ.ವಾಸೀಂ ಅವರು ನೀಡಿದ ಅರಿವಳಿಕೆಗೆ ಹುಲಿ ಬಿದ್ದಿದೆ. ಬಲೆ ಹಾಕಿ ಹಿಡಿದು, ಮೈಸೂರಿನ ಪುನರ್ ವಸತಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.
ADVERTISEMENT
ಎರಡು ದಿನಗಳ ಹಿಂದಷ್ಟೇ ಹಸುವನ್ನು ಕೊಂದಿದ್ದ ಜಾಗದಲ್ಲಿ ಅರಣ್ಯ ಇಲಾಖೆ ಕ್ಯಾಮೆರಾ ಅಳವಡಿಸಿತ್ತು. ಕೊಂದಿದ್ದ ಹಸು ತಿನ್ನಲು ಹುಲಿ ಬರುವ ನಿರೀಕ್ಷೆಯಲ್ಲಿ ಬೋನು ಇರಿಸಲಾಗಿತ್ತು. ಅದರಲ್ಲಿ ಡಾ. ವಾಸೀಂ ಹಾಗೂ ಅರಣ್ಯ ಸಿಬ್ಬಂದಿ ಬೋನಿನ ಒಳಗೆ ಕಾಯ್ದು ಕುಳಿತಿದ್ದರು.
'ಜಾನುವಾರು ತಿನ್ನಲು ಬಂದಾಗ ಅರೆವಳಿಕೆ ನೀಡಿ ಸೆರೆ ಹಿಡಿಯಲಾಗಿದೆ' ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು.
ಹುಲಿಯ ಸೆರೆಗೆ ಅರಣ್ಯ ಇಲಾಖೆಯು ಶನಿವಾರದಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು.
ಸಾಕಾನೆಗಳಾದ ಪಾರ್ಥಸಾರಥಿ, ರೋಹಿತ, ಹಿರಣ್ಯ ಜೊತೆಗೆ ಅರಣ್ಯ ಇಲಾಖೆಯ 12 ಅಧಿಕಾರಿಗಳು ಹಾಗೂ 195 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ನಾಗಣಾಪುರ, ಡೋರನಕಟ್ಟೆ, ವೆಂಕಟಗಿರಿ ಹಾಗೂ ವಡೆಯನಪುರ ಕಾಲೊನಿಗಳ ತಲಾ 25 ಗಿರಿಜನರೂ ನರಹಂತಕ ಹುಲಿಯ ಸೆರೆಗೆ ಶ್ರಮಿಸಿದ್ದರು.