ADVERTISEMENT

ವಿಡಿಯೊ: ಬೆಂಗಾವಲು ಸಿಬ್ಬಂದಿಯಿಂದ ಶೂ ಹಾಕಿಸಿಕೊಂಡ ಸಚಿವ ಎಚ್‌ಸಿ ಮಹದೇವಪ್ಪ!

ಧಾರವಾಡದಲ್ಲಿ ಹಾಸ್ಟೆಲ್ ತಪಾಸಣೆಗೆ ಹೋಗಿದ್ದ ಸಂದರ್ಭದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 10:14 IST
Last Updated 8 ನವೆಂಬರ್ 2023, 10:14 IST
<div class="paragraphs"><p>ಎಚ್‌ಸಿ ಮಹದೇವಪ್ಪ</p></div>

ಎಚ್‌ಸಿ ಮಹದೇವಪ್ಪ

   

ಧಾರವಾಡ: ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಧಾರವಾಡದ ಡಿಸಿ ಕಂಪೌಂಡ್ ಬಳಿ ಇರುವ ಗೌರಿಶಂಕರ ಹಾಸ್ಟೆಲ್‌ಗೆ ಇಂದು ಪರಿಶೀಲನೆಗೆ ತೆರಳಿದ್ದರು.

ಈ ವೇಳೆ ಅಡುಗೆ ಮನೆ ದ್ವಾರದಲ್ಲಿ ಶೂ ಕಳಚಿ ಒಳಗೆ ಹೋಗಿ ಹೊರಕ್ಕೆ ಬಂದಾಗ ಮಹದೇವಪ್ಪ ಅವರು ಬೆಂಗಾವಲು ಸಿಬ್ಬಂದಿಯೊಬ್ಬರಿಂದ ಶೂ ಹಾಕಿಸಿಕೊಂಡರು.

ADVERTISEMENT

ಹಾಸ್ಟೆಲ್ ಗೆ ಭೇಟಿ ನೀಡಿದ ಮಹದೇವಪ್ಪ ಅಡುಗೆ ಮನೆಯಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಕೋಣೆಯಿಂದ ಹೊರಗೆ ಬಂದಾಗ ಶೂಗಳನ್ನು ಸಿಬ್ಬಂದಿಯೊಬ್ಬರು ಹಾಕಿದರು.

ಹಾಸ್ಟೆಲ್ ನಲ್ಲಿ ಆಹಾರ ಪೂರೈಕೆ, ಸೌಕರ್ಯಗಳ ಕುರಿತು ವಿದ್ಯಾರ್ಥಿಗಳು ಮತ್ತು ನೌಕರರಿಂದ ಸಚಿವರು ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.