ADVERTISEMENT

ಬಸ್‌ ಚಲಾಯಿಸಿದ ಸಚಿವ ಬಿ.ಸಿ. ನಾಗೇಶ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 3:06 IST
Last Updated 23 ಅಕ್ಟೋಬರ್ 2021, 3:06 IST
ಬಸ್‌ ಚಲಾಯಿಸಲು ಚಾಲಕನ ಆಸನವೇರಿದ ಬಿ.ಸಿ.ನಾಗೇಶ್‌ –ಪ್ರಜಾವಾಣಿ ಚಿತ್ರ
ಬಸ್‌ ಚಲಾಯಿಸಲು ಚಾಲಕನ ಆಸನವೇರಿದ ಬಿ.ಸಿ.ನಾಗೇಶ್‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‍ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಬಸ್‌ ಚಲಾಯಿಸಿ ಗಮನ ಸೆಳೆದರು.

‘ಸೇವ್‌ ದಿ ಚಿಲ್ಡ್ರನ್‌’ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದಮಕ್ಕಳ ಸಂಚಾರ ಕಲಿಕಾ ಕೇಂದ್ರ ಉದ್ಘಾಟಿಸಿದ ಬಳಿಕ ಬಸ್‌ ಏರಿದ ಅವರು ಚಾಲಕನ ಆಸನದಲ್ಲಿ ಕುಳಿತು ಆವರಣದಲ್ಲೇ ಒಂದು ಸುತ್ತು ಬಸ್‌ ಚಲಾಯಿಸಿದರು.

‘ಸೇವ್‌ ದಿ ಚಿಲ್ಡ್ರನ್‌’ ಸಂಸ್ಥೆಯು ಮೂರು ಬಸ್‌ಗಳು, ಪುಸ್ತಕ ಹಾಗೂ ಡಿಜಿಟಲ್‌ ರೂಪದ ಕಲಿಕಾ ಸಾಮಗ್ರಿಗಳನ್ನು ಕೊಡುಗೆ ನೀಡಿದೆ. ಬಡವರು ಹಾಗೂ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆಶಿಕ್ಷಣ ಒದಗಿಸುವುದು ಇದರ ಉದ್ದೇಶ. ಇದಕ್ಕಾಗಿ ಶಿಕ್ಷಕರನ್ನೂ ನಿಯೋಜಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.