ADVERTISEMENT

ಬಿಎಸ್‌ವೈ ಮನೆ ವಾಚ್‌ಮ್ಯಾನ್‌ ಆಗದ ಜಮೀರ್‌ ಇನ್ನು ಆಸ್ತಿ ಕೊಡುತ್ತಾರಾ: ರಾಮದಾಸ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 16:21 IST
Last Updated 12 ಸೆಪ್ಟೆಂಬರ್ 2020, 16:21 IST
ಎಸ್‌.ಎ.ರಾಮದಾಸ್‌
ಎಸ್‌.ಎ.ರಾಮದಾಸ್‌   

ಮೈಸೂರು: ‘ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆಯ ವಾಚ್‌ಮ್ಯಾನ್‌ ಆಗುತ್ತೇನೆ ಎಂದು ಆಗಲಿಲ್ಲ. ಇನ್ನು ಆಸ್ತಿ ಬರೆದು ಕೊಡುತ್ತಾರಾ’ ಎಂದು ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್ ಅವರು ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್ ಅವರನ್ನು ಟೀಕಿಸಿದ್ದಾರೆ.‌

ಡ್ರಗ್ಸ್‌ ಮಾಫಿಯಾದಲ್ಲಿ ಯಾರೇ ಇದ್ದರೂ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅನವಶ್ಯಕ ಹೇಳಿಕೆ ನೀಡಿ ನುಣುಚಿಕೊಳ್ಳುವ ಕೆಲಸ ಮಾಡಬಾರದು. ತನಿಖೆಗೆ ಆಗ್ರಹಿಸಬೇಕು. ಇದಕ್ಕೆ ವಿರೋಧ ಪಕ್ಷದ ಮುಖಂಡರೂ ಸಹಕರಿಸಬೇಕು ಎಂದರು.

ಡ್ರಗ್ಸ್‌ ಪ್ರಕರಣದಲ್ಲಿ ನಟಿ ಸಂಜನಾ ಜೊತೆ ಕೊಲಂಬೊಗೆ ಹೋಗಿದ್ದ ಆರೋಪ ಸಾಬೀತಾದರೆ ತಮ್ಮೆಲ್ಲ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದುಕೊಡುವುದಾಗಿ ಜಮೀರ್‌ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.