ADVERTISEMENT

ಶಿವಮೊಗ್ಗ ‘ಕಾಡಾ’ ಕಚೇರಿಗೆ ನುಗ್ಗಿ ದಾಂಧಲೆ ಆರೋಪ: ಶಾಸಕ ರೇಣುಕಾಚಾರ್ಯ ಆರೋಪಮುಕ್ತ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 10:47 IST
Last Updated 26 ಆಗಸ್ಟ್ 2019, 10:47 IST
   

ಬೆಂಗಳೂರು: ಭದ್ರಾ ಜಲಾಶಯದಿಂದ ಶಿವಮೊಗ್ಗದ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಶಿವಮೊಗ್ಗದ ‘ಕಾಡಾ’ (ನಾಲಾ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಕಚೇರಿಗೆ ನುಗ್ಗಿ ಅಧಿಕಾರಿಗಳ ಮೇಲೆ ಮೌಖಿಕ ದೌರ್ಜನ್ಯ ನಡೆಸಿದ ಆರೋಪದಿಂದ ಶಾಸಕ ರೇಣುಕಾಚಾರ್ಯ ಅವರನ್ನು ಜನಪ್ರತಿನಿಧಿಗಳ ಕೋರ್ಟ್ ಮುಕ್ತಗೊಳಿಸಿದೆ.

ಈ ಕುರಿತಂತೆ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ಸೋಮವಾರ ಆದೇಶ ಪ್ರಕಟಿಸಿದರು.

ಬೆಂಬಲಿಗರೊಡನೆ ಕಚೇರಿ‌ಗೆ ಮುತ್ತಿಗೆ ಹಾಕಿ, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದ‌ ಆರೋಪ ರೇಣುಕಾಚಾರ್ಯ ಮೇಲಿತ್ತು.

ADVERTISEMENT

ರೇಣುಕಾಚಾರ್ಯ ಕೋರ್ಟ್‌ಗೆ ಹಾಜರಾಗಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.