ADVERTISEMENT

‘ಎಂಎಲ್‌ಎ ಬದನೆಕಾಯಿ ಅಲ್ಲ ಮಾರಾಟವಾಗಲು’: ಶಾಸಕ ಸಿ.ಎಸ್‌. ಶಿವಳ್ಳಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 9:12 IST
Last Updated 6 ಡಿಸೆಂಬರ್ 2018, 9:12 IST
ಸಿ.ಎಸ್‌. ಶಿವಳ್ಳಿ
ಸಿ.ಎಸ್‌. ಶಿವಳ್ಳಿ   

ಹುಬ್ಬಳ್ಳಿ: ‘ಎಂಎಲ್ಎ ಬದನೆಕಾಯಿ ಅಲ್ಲ ಮಾರಾಟವಾಗಲು, ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ’ ಎಂದು ಕುಂದಗೋಳ ಶಾಸಕ ಸಿ.ಎಸ್‌. ಶಿವಳ್ಳಿ ಹೇಳಿದರು.

ಆಪರೇಷನ್‌ ಕಮಲ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗುರುವಾರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆಪರೇಷನ್ ಕಮಲಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದೆ, ಇದಕ್ಕಾಗಿ ಹಿರಿಯ ನಾಯಕರಿಗೆ ಮನವಿಯನ್ನೂ ಮಾಡಿದ್ದೇನೆ. ಅವಕಾಶ ಸಿಗದೆ ಇದ್ದರೂ ಆ ವಿಷಯವನ್ನು ಸಹ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು’ ಎಂದರು.

‘ಇದೇ 22ರಂದು ಸಂಪುಟ ವಿಸ್ತರಣೆಗೆ ಹಿರಿಯರು ನಿರ್ಧರಿಸಿದ್ದಾರೆ. ಅಂದೇ ವಿಸ್ತರಣೆ ಆಗುವ ವಿಶ್ವಾಶ ಇದೆ. ಮತ್ತೆ ಮುಂದಕ್ಕೆ ಹೋಗುವುದಿಲ್ಲ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.