ADVERTISEMENT

ಮುಸ್ಲಿಮರದ್ದು ಕಲ್ಲು ಹೊಡೆಯುವ ಸಂಸ್ಕೃತಿ: ಸಂಸದ ಪ್ರತಾಪಸಿಂಹ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 8:29 IST
Last Updated 21 ಏಪ್ರಿಲ್ 2022, 8:29 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: 'ಕಲ್ಲು ಹೊಡೆಯುವುದೇ ಮುಸ್ಲಿಮರ ಸಂಸ್ಕೃತಿಯಾಗಿದೆ. ಹಿಂದೂ ಹಬ್ಬಗಳ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುತ್ತಾರೆ. ಹಿಂದೂಗಳನ್ನು ಸೈತಾನರಂತೆ ನೋಡುತ್ತಾರೆ' ಎಂದು ಸಂಸದ ಪ್ರತಾಪ ಸಿಂಹ ಆರೋಪಿಸಿದರು.

'ಮುಸ್ಲಿಮರು ಮನಸ್ಥಿತಿ ಬದಲಿಸಿಕೊಳ್ಳಬೇಕು. ಕಲ್ಲು ತೂರುವ ಸಂಸ್ಕೃತಿ ಬಿಡಬೇಕು. ಇಲ್ಲದಿದ್ದರೆ ಕಲ್ಲು ತೂರುವವರ ಮನೆ ಬಳಿಗೆ ಬುಲ್ಡೋಜರ್ ಬರಲಿದೆ' ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

'ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಸಂಭವಿಸಿದ ಗಲಭೆಗಳಲ್ಲಿ ಮುಸ್ಲಿಮರ ಮನಸ್ಥಿತಿ ಹೇಗಿದೆ ಎಂಬುದು ಗೊತ್ತಾಗಿದೆ. ಮುಸ್ಲಿಮರ ಮೆರವಣಿಗೆ ಮೇಲೆ ಹಿಂದೂಗಳು ಯಾವತ್ತೂ ಕೂಡ ಕಲ್ಲು ತೂರಾಟ ನಡೆಸಿಲ್ಲ. ಕ್ರಿಶ್ಚಿಯನ್, ಪಾರ್ಸಿಗಳು ಸೇರಿದಂತೆ ಯಾವುದೇ ಧರ್ಮೀಯರು ಕಲ್ಲು ತೂರುವುದಿಲ್ಲ' ಎಂದರು.

ADVERTISEMENT

ಸಿದ್ದರಾಮಯ್ಯಗೆ ತಿರುಗೇಟು: ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಅಂಬಾನಿ, ಅದಾನಿಯವರ ಆದಾಯ ದುಪ್ಪಟ್ಟಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ,'ಯಾವ ಹೊಲದಲ್ಲಿ ಆಲೂಗೆಡ್ಡೆ, ಜೋಳ ಬೆಳೆದು ನಿಮ್ಮ ನಾಯಕರು ಶ್ರೀಮಂತರಾದರು? 30 ವರ್ಷಗಳ ಹಿಂದೆ ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ, ಡಿ.ಕೆ. ಶಿವಕುಮಾರ್ ಹೇಗಿದ್ದರು? ಅಂಬಾನಿ, ಅದಾನಿಯವರೆಲ್ಲಾ ಉದ್ಯಮಿಗಳು.ಅವರು ಹಣವನ್ನು ದುಪ್ಪಟ್ಟು ಮಾಡಬೇಕೆಂದೇ ಯೋಚಿಸುತ್ತಾರೆ. ಆದರೆ, ರಾಜಕಾರಣಿಗಳು ಇಷ್ಟೊಂದು ಶ್ರೀಮಂತರಾಗಲು ಹೇಗೆ ಸಾಧ್ಯವಾಯಿತು' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.