ADVERTISEMENT

ಬಿಎಸ್‌ವೈ ಜತೆ ಮನಸ್ತಾಪ ಇಲ್ಲವೇ ಇಲ್ಲ, ಅನರ್ಹರಿಗೆ ಅನ್ಯಾಯ ಮಾಡಲ್ಲ: ನಳಿನ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 6:12 IST
Last Updated 3 ಅಕ್ಟೋಬರ್ 2019, 6:12 IST
ನಳಿನ್ ಕುಮಾರ್ ಕಟೀಲ್ (ಸಂಗ್ರಹ ಚಿತ್ರ)
ನಳಿನ್ ಕುಮಾರ್ ಕಟೀಲ್ (ಸಂಗ್ರಹ ಚಿತ್ರ)   

ಬೆಂಗಳೂರು:ಮುಖ್ಯಮಂತ್ರಬಿ. ಎಸ್. ಯಡಿಯೂರಪ್ಪಜತೆ ಮನಸ್ತಾಪ ಇಲ್ಲವೇ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ಹೇಳಿದರು.

ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ವಾಪಸ್‌ ತೆರಳುವ ವೇಳೆ ಪತ್ರಕರ್ತರ ಜತೆ ಮಾತನಾಡದೆ ತೆರಳಿದ್ದ ಅವರು ತುಸು ಹೊತ್ತಿನಲ್ಲಿ ಮತ್ತೆ ಅಲ್ಲಿಗಾಗಮಿಸಿದರು. ಬಳಿಕ ಮಾತನಾಡಿ, ‘ಮುಖ್ಯಮಂತ್ರಿ ಅವರೇ ನಮಗೆ ಮಾರ್ಗದರ್ಶಕರು. ಅವರ ಸಲಹೆಯಂತೆಯೇ ಪಕ್ಷದ ಸಂಘಟನೆ ನಡೆಯುತ್ತಿದೆ’ ಎಂದು ಹೇಳಿದರು.

ಅನರ್ಹ ಶಾಸಕರಿಗೆ ಅನ್ಯಾಯ ಮಾಡುವುದಿಲ್ಲ ಎಂದು ನಳಿನ್ ಸ್ಪಷ್ಟಪಡಿಸಿದರು.

‘ಅನರ್ಹ ಶಾಸಕರ ಕುರಿತು, ಅವರಿಗೆ ಹೇಗೆ ನ್ಯಾಯ ಕೊಡಬೇಕು ಎಂಬ ಬಗ್ಗೆ ನಾನು, ಯಡಿಯೂರಪ್ಪ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಚರ್ಚಿಸಿ ನಿರ್ಧರಿಸಲಿದ್ದೇವೆ. ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಅವರು ಹೇಳಿದರು.

ಮಾತನಾಡದೆ ತೆರಳಿದ್ದಕ್ಕೆ ಸಮಜಾಯಿಷಿ:‘ನಾನು 11.30ರ ವಿಮಾನದಲ್ಲಿ ಮಂಗಳೂರಿಗೆ ತೆರಳಬೇಕಿತ್ತು. ಅದಕ್ಕಾಗಿ ಧಾವಿಸಿ ಹೋದೆ, ನೀವು ಇಲ್ಲಿ ಕಾಯುತ್ತಿದ್ದುದೂ ಗೊತ್ತಾಗಲಿಲ್ಲ ಎಂದು ನಳಿನ್ ಸಮಜಾಯಿಷಿ ನೀಡಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.