ADVERTISEMENT

ಕಾಶಿ ಪೀಠಕ್ಕೆ ನೂತನ ಜಗದ್ಗುರು ‍ಪಟ್ಟಾಭಿಷೇಕ ಇಂದು

​ಪ್ರಜಾವಾಣಿ ವಾರ್ತೆ
Published 12 ಮೇ 2022, 18:54 IST
Last Updated 12 ಮೇ 2022, 18:54 IST
ಮಲ್ಲಿಕಾರ್ಜುನ ಶಿವಾಚಾರ್ಯ
ಮಲ್ಲಿಕಾರ್ಜುನ ಶಿವಾಚಾರ್ಯ   

ರಾಯಚೂರು: ವೀರಶೈವ ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠಕ್ಕೆ ದೇವದುರ್ಗ ತಾಲ್ಲೂಕು ಜಾಲಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರನ್ನು ಜಗದ್ಗುರುವಾಗಿ ನೇಮಿಸಲಾಗಿದೆ.

ಶುಕ್ರವಾರ (ಮೇ 13) ಕಾಶಿ ಸಮೀಪದ ಜಂಗಮವಾಡಿಯಲ್ಲಿ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ.

ಈವರೆಗೆಅವರು ಸೊಲ್ಲಾಪುರದ ಹೊಟಗಿ ಬೃಹನ್ಮಠದ ಪೀಠಾಧಿಕಾರಿಯಾಗಿದ್ದರು. ಹಾಲಿ ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ
ಸ್ವಾಮೀಜಿ ಅವರು ಆರು ತಿಂಗಳ ಹಿಂದೆಯೇ ಇವರ ಹೆಸರು ಘೋಷಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.