ಕುಶಾಲನಗರ (ಕೊಡಗು ಜಿಲ್ಲೆ): ಇಲ್ಲಿನ 6ನೇ ಹೊಸಕೋಟೆ ಗ್ರಾಮದ ನಿವಾಸಿ ಅಕ್ಷಿತಾ (18) ಅವರು, ಮದುವೆಯಾದ ಐದನೇ ದಿನವಾದ ಬುಧವಾರ ಪತಿಯ ಮನೆಯಲ್ಲಿ ಮೃತಪಟ್ಟಿದ್ದು, ಪತಿ ಹೇಮಂತ್ (30), ಮಾವ ದಶರಥ ಹಾಗೂ ಅತ್ತೆ ಗಿರಿಜಾ ಅವರ ವಿರುದ್ಧ, ಕೊಲೆ ಹಾಗೂ ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
‘ಪರಿಶಿಷ್ಟ ಜಾತಿಯ ಆದಿಕರ್ನಾಟಕ ಸಮುದಾಯಕ್ಕೆ ಸೇರಿದ ಅಕ್ಷಿತಾ ಅವರು ಒಕ್ಕಲಿಗರಾದ ಹೇಮಂತ್ ಅವರನ್ನು ನಾಲ್ಕು ದಿನದ ಹಿಂದೆ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ದಂಪತಿ ಪೋಷಕರಿಂದ ದೂರವಿದ್ದರು. ಮಂಗಳವಾರ ತೀವ್ರ ರಕ್ತಸ್ರಾವದಿಂದ ಅಕ್ಷಿತಾ ಮೃತಪಟ್ಟರು. ಅದನ್ನು ಕಂಡು ಪತಿ ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ಷಿತಾ ಅವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಅಕ್ಷಿತಾ ಅವರದ್ದು ಮರ್ಯಾದೆ ಗೇಡು ಹತ್ಯೆ’ ಎಂದು ಆರೋಪಿಸಿ, ‘ಆರೋಪಿಗಳನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿ ಎಸ್ಡಿಪಿಐ, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಹಾಗೂ ಸಿಪಿಐ (ಎಂಎಲ್ಆರ್ಐ) ಮುಖಂಡರು ಜಿಲ್ಲಾ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.