ADVERTISEMENT

ಬೆಂಗಳೂರು | ಚುನಾವಣಾ ಕಾರ್ಯಗಳಿಂದ ಶಿಕ್ಷಕರಿಗೆ ಮುಕ್ತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 15:45 IST
Last Updated 27 ಜುಲೈ 2023, 15:45 IST
ಪ್ರಾತಿನಿಧಿಕ ಚಿತ್ರ್ರ
ಪ್ರಾತಿನಿಧಿಕ ಚಿತ್ರ್ರ   

ಬೆಂಗಳೂರು: ಮತಗಟ್ಟೆ ಅಧಿಕಾರಿಗಳನ್ನಾಗಿ (ಬಿಎಲ್‌ಒ) ಶಿಕ್ಷಕರನ್ನು ನಿಯೋಜಿಸದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಚುನಾವಣೆಯ ವಿವಿಧ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸಿದರೆ ಬೋಧನೆಗೆ ತೊಂದರೆಯಾಗುತ್ತದೆ. ಇಲಾಖೆ ನಿಗದಿ ಮಾಡುವ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ರಜಾ ದಿನಗಳನ್ನು ಹೊರತುಪಡಿಸಿ 244 ದಿನಗಳನ್ನು ಶಾಲಾ ದಿನಗಳು ಎಂದು ಪರಿಗಣಿಸಲಾಗಿದೆ. ಪರೀಕ್ಷೆ, ಮೌಲ್ಯಮಾಪನ ಕಾರ್ಯಗಳ ಅವಧಿ ಕಳೆದರೆ ಬೋಧನೆಗೆ 180 ದಿನಗಳಷ್ಟೆ ಲಭ್ಯವಾಗುತ್ತವೆ. ವಾಸ್ತವದಲ್ಲಿ ಅಷ್ಟು ದಿನಗಳು ಸಿಗುತ್ತಿಲ್ಲ. ಅವರನ್ನು ಚುನಾವಣಾ ಕಾರ್ಯಗಳಿಗೆ ಬಳಸಿಕೊಂಡರೆ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತದೆ. ಶಿಕ್ಷಕರನ್ನು ಬೋಧನೇತರ ಕಾರ್ಯಗಳಿಗೆ ಬಳಸಿಕೊಳ್ಳದಂತೆ ಕೋರ್ಟ್‌ ಆದೇಶಗಳಿವೆ. ಹಾಗಾಗಿ, ಬಿಎಲ್‌ಒಗಳಾಗಿ ನಿಯೋಜಿಸಬಾರದು ಎಂದು ಆಯುಕ್ತೆ ಬಿ.ಬಿ.ಕಾವೇರಿ ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT