ಬೆಂಗಳೂರು: ಲಾಕ್ಡೌನ್ ಕಾರಣ ಕೆ.ಆರ್.ಪುರ ಬಸವನಪುರ ವಾರ್ಡ್ನಲ್ಲಿ ದಿನಸಿ ಹಾಗೂ ಕೋಳಿಗಳ ಪಡೆಯಲು ಜನರು ಮುಗಿಬಿದ್ದರು.
ಗುರುವಾರ ಬೆಳಿಗ್ಗೆನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ನೇತೃತ್ವದಲ್ಲಿ ತಮ್ಮ ಕ್ಷೇತ್ರದ ಜನರಿಗೆಆಹಾರ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಅಂತರಕಾಯ್ದುಕೊಳ್ಳದ ಜನರು ಕೋಳಿ ಹಾಗೂ ಆಹಾರ ಕಿಟ್ ಪಡೆಯಲು ಒಬ್ಬರ ಮೇಲೆ ಒಬ್ಬರು ಬೀಳುತ್ತಾ ನೂಕು ನುಗ್ಗಲಲ್ಲಿ ನಿಂತಿರುವುದು ಕಂಡು ಬಂತು.
ಎರಡು ತಿಂಗಳು ಮನೆಯಲ್ಲಿದ್ದ ಜನರು ಗುಂಪು ಗುಂಪಾಗಿ ಬರುತ್ತಿದ್ದುದು ಕಂಡು ಬಂತು. ಈ ಸಮಯದಲ್ಲಿ ಪೊಲೀಸರು ಹತ್ತಿರದಲ್ಲಿಯೇ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿದ್ದರು. ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ. ಕೋಳಿ ಹಾಗೂ ಆಹಾರ ಕಿಟ್ ನೀಡುವವರೂ ಸರಿಯಾದ ಸಾಲಿನಲ್ಲಿ ಜನರನ್ನು ನಿಲ್ಲಿಸಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.