ADVERTISEMENT

ಪ್ರಜಾವಾಣಿ ಚಿತ್ರ ಶೀರ್ಷಿಕೆ ಸ್ಪರ್ಧೆ ವಿಜೇತರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:01 IST
Last Updated 19 ನವೆಂಬರ್ 2018, 20:01 IST

ಬೆಂಗಳೂರು: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ‘ಪ್ರಜಾವಾಣಿ’ ಆಯೋಜಿಸಿದ್ದ ಚಿತ್ರ ಶೀರ್ಷಿಕೆ ಸ್ಪರ್ಧೆಯಲ್ಲಿ ಅತ್ಯುತ್ತಮ ಶೀರ್ಷಿಕೆಗಳನ್ನು ನೀಡಿದ್ದ ಐವರು ಬಹುಮಾನ ಗಿಟ್ಟಿಸಿದ್ದಾರೆ.

ಬೈಲಕುಪ್ಪೆಯ ಸ್ವಾಮಿ ಸ. ಬೈಲಕುಪ್ಪೆ, (ಶೀರ್ಷಿಕೆ:ಪ್ರಾಯದ‍ ಹಂಗಿಲ್ಲ ತಿರುಗಾಟಕೆ, ಅದುವೇ ದಿವ್ಯೌಷಧ ಬದುಕಿನ ಜಂಜಾಟಕೆ), ರಾಯಚೂರಿನ ಸುನೀತಾ ಪರ್ವತಯ್ಯ (ಕಾವಿಯ ಮುಖದಲ್ಲಿ ಅರಳಿದ ಬಣ್ಣ), ಕೂಡ್ಲಿಗಿ ತಾಲ್ಲೂಕು ದೂಪದಹಳ್ಳಿಯ ಮಂಜುನಾಥ ಗೂಳಿ (ಧ್ಯಾನಕ್ಕೊಂದೇ ಅಲ್ಲ, ಯಾನಕ್ಕೂ ತೆರೆದಿದೆ ಪ್ರಪಂಚ), ನಾಲತವಾಡದ ಬಸವರಾಜ ನವಲಿ (ಕಪ್ಪು ಕನ್ನಡಕದ ಹಿಂದೆ ಮಿಂಚು ಬೆಳಕನು ಹುಡುಕುವ ಬಯಕೆ) ಹಾಗೂ ಮೈಸೂರಿನ ಬಿ.ಎಂ.ನಾಗರಾಜ (ಕನ್ನಡಕದ ಒಳಗೂ ಹಾಗೂ ಹೊರಗೂ ವಿಸ್ಮಯ ತೋರುವ ಕಲರವಗಳ ಆಗರ ನಮ್ಮ ಭಾರತ) ಬಹುಮಾನ ಪಡೆದವರು.

ತಲಾ ₹ 1 ಸಾವಿರ ನಗದು ಬಹುಮಾನವನ್ನು ಎಲ್ಲ ವಿಜೇತರಿಗೆ ಕಳುಹಿಸಿಕೊಡಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.