ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಸುಮಾರು 15 ಸಾವಿರ ಜನರೊಂದಿಗೆ ಯೋಗಾಭ್ಯಾಸ ಮಾಡಿದ ಬಳಿಕ ಅವರು ದೆಹಲಿಗೆ ತೆರಳಿದರು.
ಮೋದಿ ಅವರು ಯೋಗಾಭ್ಯಾಸದ ನಂತರ ವಸ್ತುಪ್ರದರ್ಶ ಮಳಿಗೆಯನ್ನು ಲೋಕಾರ್ಪಣೆ ಮಾಡಿದರು. ನಂತರ ಅರಮನೆಗೆ ತೆರಳಿ ರಾಜವಂಶಸ್ಥರ ಜೊತೆ ಉಪಹಾರ ಸೇವಿಸಿದರು.
ಎರಡು ದಿನಗಳ ಪ್ರವಾಸದ ಬಳಿಕ ಮೋದಿ ಅವರು ಇಲ್ಲಿನ ಮಡಂಕಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.