ADVERTISEMENT

ದೇಶದ ಕಾನೂನಿಗಿಂತಲೂ ದ್ವೇಷದ ರಾಜಕಾರಣವೇ ಬಲಿಷ್ಠ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 15:51 IST
Last Updated 4 ಸೆಪ್ಟೆಂಬರ್ 2019, 15:51 IST
   

ಬೆಂಗಳೂರು: ದ್ವೇಷದ ರಾಜಕಾರಣವು ಈ ದೇಶದ ಕಾನೂನಿಗಿಂತಲೂ ಹೆಚ್ಚು ಬಲಿಷ್ಠವಾಗಿದೆಎಂದು ಕಾಂಗ್ರೆಸ್‌ ಮುಖಂಡಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ.

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಡಿ.ಕೆ ಶಿವಕುಮಾರ್‌ ಅವರನ್ನು ಅಧಿಕಾರಿಗಳುದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವ ವಿಶೇಷ ನ್ಯಾಯಲಯದ ಎದುರು ಹಾಜರುಪಡಿಸಿದರು. ಕೋರ್ಟ್‌ ಆವರಣದಲ್ಲಿರುವಾಗಲೇ ತಮ್ಮ ಅಭಿಪ್ರಾಯವನ್ನುವಿಡಿಯೊ ಮಾಡಿ ಮಾಡಿರುವಡಿಕೆಶಿ, ಅದನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

‘ದ್ವೇಷದ ರಾಜಕಾರಣವೆಂಬುದುಈ ದೇಶದ ಕಾನೂನಿಗಿಂತಲೂ ಬಲಿಷ್ಠವಾಗಿದೆ,’ಎಂದು ಅವರು ವಿಡಿಯೋದಲ್ಲಿಹೇಳಿದ್ದಾರೆ.

ADVERTISEMENT

ಮಂಗಳವಾರ ರಾತ್ರಿ ಇ.ಡಿ ಬಂಧನಕ್ಕೆ ಒಳಗಾಗಿದ್ದ ಡಿ.ಕೆ ಶಿವಕುಮಾರ್‌ ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸುದೀರ್ಘ ವಾದ ವಿವಾದಗಳ ನಂತರ ಡಿಕೆಶಿ ಅವರನ್ನು ಸೆ.13ರ ವರೆಗೆ ಇ.ಡಿ ವಶಕ್ಕೆ ನೀಡಿ ಕೋರ್ಟ್‌ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.