ADVERTISEMENT

ಮಠಾಧೀಶರು ಜಾತಿ ಸೋಂಕಿನಿಂದ ಮುಕ್ತರಾಗಲಿ: ಕುಂ. ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 21:16 IST
Last Updated 22 ಜನವರಿ 2023, 21:16 IST
ಕುಂ.ವೀರಭದ್ರಪ್ಪ
ಕುಂ.ವೀರಭದ್ರಪ್ಪ   

ವಾಡಿ (ಕಲಬುರಗಿ ಜಿಲ್ಲೆ): ‘ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮಠಗಳು ಹಾಗೂ ಮಠಾಧೀಶರು ಜಾತಿ, ಧರ್ಮಗಳ ಸೋಂಕಿನಿಂದ ಮುಕ್ತರಾಗಿ ಎಲ್ಲರನ್ನೂ ಅಪ್ಪಿಕೊಳ್ಳುವ ಶ್ರೇಷ್ಠ ಗುಣ ಹೊಂದಿರಬೇಕು’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ವಾಡಿ ಸಮೀಪದ ನಾಲವಾರ ಗ್ರಾಮದಲ್ಲಿ ಭಾನುವಾರ ಕೋರಿಸಿದ್ಧೇಶ್ವರ ಶಿವಯೋಗಿ‌ಗಳ ಜಾತ್ರೆಯ ಉದ್ಘಾಟನೆಯಲ್ಲಿ 2023ರ ’ಶ್ರೀಸಿದ್ಧ ತೋಟೇಂದ್ರ ಸಾಹಿತ್ಯ ರತ್ನ‘ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಮಠದ ಪರಂಪರೆ ಹೊಂದಿರುವ ಭಾರತದಲ್ಲಿ ಅಕ್ಷರದ ಅರಿವು ಮೂಡಿಸುವಲ್ಲಿ ಮಠಗಳು ಬಹುದೊಡ್ಡ ಪಾತ್ರ ವಹಿಸುತ್ತಿವೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.