ADVERTISEMENT

ಎಎಪಿ ರಾಜ್ಯ ಘಟಕದ‌ ಅಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 6:36 IST
Last Updated 5 ಜೂನ್ 2022, 6:36 IST
ಪೃಥ್ವಿ ರೆಡ್ಡಿ
ಪೃಥ್ವಿ ರೆಡ್ಡಿ    

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿಯ (ಎಎಪಿ) ರಾಜ್ಯ ಘಟಕದ‌ ಅಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಪುನರಾಯ್ಕೆ ಆಗಿದ್ದಾರೆ.

ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿರ್ದೇಶನದಂತೆ ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ ರಾಜ್ಯ ಪದಾಧಿಕಾರಿಗಳ ತಂಡದ ಪುನಾರಚನೆ ಮಾಡಿದ್ದಾರೆ.

ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಹಾಗೂ ವಿಜಯ್‌ ಶರ್ಮಾ ಅವರನ್ನು ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ರಾಜ್ಯ ಘಟಕದ ಪ್ರಧಾ‌ನ ಕಾರ್ಯದರ್ಶಿಯಾಗಿ ಸಂಚಿತ್‌ ಸಹಾನಿ, ಖಜಾಂಚಿಯಾಗಿ ಹರಿಹರನ್‌, ಮಾಧ್ಯಮ‌ ವಿಭಾಗದ ಉಸ್ತುವಾರಿಯಾಗಿ ಜಗದೀಶ್ ವಿ. ಸದಂ, ರಾಜ್ಯ ಘಟಕದ ವಕ್ತಾರರಾಗಿ ಕೆ. ಮಥಾಯ್ ಅವರನ್ನು ನೇಮಕ ಮಾಡಲಾಗಿದೆ.

ADVERTISEMENT

ರಾಜ್ಯ ಘಟಕದ ಕಾರ್ಯದರ್ಶಿಗಳಾಗಿ ಎಚ್.ಡಿ.ಬಸವರಾಜು, ಡಾ. ವೆಂಕಟೇಶ್‌, ಬಿ.ಟಿ.ನಾಗಣ್ಣ, ಲಕ್ಷ್ಮೀಕಾಂತ್‌ ರಾವ್‌, ಶಾಂತಲಾ ದಾಮ್ಲೆ ನೇಮಕಗೊಂಡಿದ್ದಾರೆ.

ಜಂಟಿ ಕಾರ್ಯದರ್ಶಿಗಳಾಗಿ ದರ್ಶನ್‌ ಜೈನ್‌ ಹಾಗೂ ವಿವೇಕಾನಂದ ಸಾಲಿನ್ಸ್ ಅವರನ್ನು ನೇಮಿಸಲಾಗಿದೆ.
ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಬೆಂಗಳೂರು ನಗರ ಘಟಕದ ಅಧ್ಯಕ್ಷರನ್ನಾಗಿ ಮೋಹನ್ ದಾಸರಿ ಅವರನ್ನು ಪುನರಾಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.