ADVERTISEMENT

ಸಾಗರಮಾಲಾ ಯೋಜನೆ ವಿರೋಧಿಸಿ ಸಮುದ್ರಕ್ಕಿಳಿದು ಪ್ರತಿಭಟನೆ: ಮೂವರು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 11:11 IST
Last Updated 13 ಜನವರಿ 2020, 11:11 IST
ಸಾಗರಮಾಲಾ ಯೋಜನೆಯ ಕಾಮಗಾರಿ ವಿರೋಧಿಸಿ ಪ್ರತಿಭಟಿಸಿ ಸಮುದ್ರಕ್ಕಿಳಿದ ಮೀನುಗಾರ ಮಹಿಳೆಯರು
ಸಾಗರಮಾಲಾ ಯೋಜನೆಯ ಕಾಮಗಾರಿ ವಿರೋಧಿಸಿ ಪ್ರತಿಭಟಿಸಿ ಸಮುದ್ರಕ್ಕಿಳಿದ ಮೀನುಗಾರ ಮಹಿಳೆಯರು   
""

ಕಾರವಾರ: ಸಾಗರಮಾಲಾ ಯೋಜನೆಯ ಕಾಮಗಾರಿ ವಿರೋಧಿಸಿ ಪ್ರತಿಭಟಿಸುತ್ತಿದ್ದ ಮೂವರು ಮೀನುಗಾರ ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ.

ಕಡಲತೀರದಲ್ಲಿ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದವರು ಸಮುದ್ರಕ್ಕೂ ಇಳಿದು ಹೋರಾಟ ಮುಂದುವರಿಸಿದರು. ಬೆಳಗ್ಗೆ ಒಬ್ಬರು ಹಾಗೂ ಮಧ್ಯಾಹ್ನ ಇಬ್ಬರು ಮಹಿಳೆಯರು ಅಸ್ವಸ್ಥರಾದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

ಕಾಮಗಾರಿಯ ಸ್ಥಳಕ್ಕೆ ಬೆಳಗ್ಗೆ ನುಗ್ಗಲು ಯತ್ನಿಸಿದ 70ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ಬೆಳಗ್ಗೆ ವಶಕ್ಕೆ ಪಡೆದಿದ್ದರು. ಅವರನ್ನು ಮಧ್ಯಾಹ್ನ ಬಿಡುಗಡೆ ಮಾಡಿದರು.

ADVERTISEMENT

ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಹಾಗೂ ಸ್ಥಳೀಯ ಮುಖಂಡರು ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಚರ್ಚಿಸಿದರು.

ಅಘೋಷಿತ ಬಂದ್ ವಾತಾವರಣ

ಕಾರವಾರದಲ್ಲಿ ಅಘೋಷಿತ ಬಂದ್ ವಾತಾವರಣವಿದೆ. ಮೀನುಗಾರರ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ವರ್ತಕರನ್ನು ಮತ್ತು ಹೋಟೆಲ್ ಉದ್ಯಮಿಗಳನ್ನು ವ್ಯವಹಾರ ಸ್ಥಗಿತಗೊಳಿಸಲು ಮನವಿ ಮಾಡಿದರು. ಅವರ ಕೋರಿಕೆಯನ್ನು ಮನ್ನಿಸಿದ ವರ್ತಕರು ಅಂಗಡಿ, ಹೋಟೆಲ್ ಗಳ ಬಾಗಿಲು ಮುಚ್ಚಿ ಬೆಂಬಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.