ADVERTISEMENT

ನಿನ್ನಿಂದಲೇ ಎಲ್ಲ ಆಗಿದ್ದು, ಅಪ್ಪ ಜೈಲಿಗೆ ಹೋಗಿದ್ದು ಎಂದ ದಿವ್ಯಾ ಹಾಗರಗಿ ಮಕ್ಕಳು

​ಪ್ರಜಾವಾಣಿ ವಾರ್ತೆ
Published 2 ಮೇ 2022, 7:51 IST
Last Updated 2 ಮೇ 2022, 7:51 IST
   

ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಸಿಐಡಿ ವಿಚಾರಣೆ ಎದುರಿಸುತ್ತಿರುವ ನಗರದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಮಕ್ಕಳನ್ನು ಕಂಡು ಕಣ್ಣೀರಿಟ್ಟಿದ್ದಾರೆ.

ರಾಜೇಶ್ ಹಾಗರಗಿ ಹಾಗೂ ದಿವ್ಯಾ ಹಾಗರಗಿ ಬಂಧನದ ಬಳಿಕ ಮಕ್ಕಳನ್ನು ವಿಜಯಪುರದ ತವರು ಮನೆಯಲ್ಲಿ ಇರಿಸಲಾಗಿತ್ತು. ದಿವ್ಯಾ ಅವರ ಸಹೋದರ ಭಾನುವಾರ ತಾಯಿಯ ಭೇಟಿಗಾಗಿ ಮಕ್ಕಳನ್ನು ಕರೆತಂದಿದ್ದರು.

ಈ ಸಂದರ್ಭದಲ್ಲಿ ತಾಯಿ ದಿವ್ಯಾ ಅವರ ಬಗ್ಗೆ ಮುನಿಸಿಕೊಂಡ ಮಕ್ಕಳು, ನಿನ್ನಿಂದಲೇ ಎಲ್ಲಾ ಆಗಿದ್ದು, ಅಪ್ಪ ಜೈಲಿಗೆ ಹೋಗುವಂತಾಯಿತು. ಎಲ್ಲವನ್ನೂ ಟಿ.ವಿ.ಯಲ್ಲಿ ನೋಡಿದ್ದೇವೆ ಎನ್ನುವುದನ್ನು ಕೇಳಿ ಮತ್ತೆ ಕಣ್ಣೀರು ಹಾಕಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.