ADVERTISEMENT

ರಮೇಶ ಜಾರಕಿಹೊಳಿ ನನ್ನ ಲೆವಲ್‌ನವರಲ್ಲ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 14:02 IST
Last Updated 25 ಸೆಪ್ಟೆಂಬರ್ 2019, 14:02 IST
   

ಬೆಳಗಾವಿ: ‘ಅನರ್ಹ ಶಾಸಕ ರಮೇಶ ಜಾರಕಿಹೊಳಿ ನನ್ನ ಮಟ್ಟಕ್ಕೆ ಬರುವುದಿಲ್ಲ’ ಎಂದು ಶಾಸಕ ಎಂ.ಬಿ. ಪಾಟೀಲ ಹೇಳಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅವರೊಬ್ಬ ಅಪ್ರಬುದ್ಧ ರಾಜಕಾರಣಿ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರು ನನ್ನ ಮನೆಗೆ ನೂರು ಬಾರಿ ಬಂದಿದ್ದಾರೆಯೇ ಹೊರತು, ನಾನು ಒಮ್ಮೆಯೂ ಅವರ ಮನೆಗೆ ಹೋಗಿಲ್ಲ. ಎಂದಿಗೂ ಬಿಜೆಪಿಯ ಕದ ತಟ್ಟಿಲ್ಲ. ಬಿಜೆಪಿಯವರೂ ನನ್ನನ್ನು ಸಂಪರ್ಕಿಸಿಲ್ಲ. ಮೈತ್ರಿ ಸರ್ಕಾರವಿದ್ದಾಗ ಅಸಮಾಧಾನ ಇದ್ದದ್ದು ನಿಜ. ಆದರೆ, ನಾನೆಂದೂ ಅವರಂತೆ ಬಹಿರಂಗವಾಗಿ ಹೇಳಿ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಮಾಡಿಲ್ಲ’ ಎಂದು ತಿರುಗೇಟು ನೀಡಿದರು.

‘ಈ ಉಪಚುನಾವಣೆಯು ಕಾಂಗ್ರೆಸ್‌– ಬಿಜೆಪಿ ಮತ್ತು ಕಾಂಗ್ರೆಸ್‌– ಅನರ್ಹ ಶಾಸಕರ ನಡುವಿನ ಹಣಾಹಣಿಯಾಗಿದೆ. ಅನರ್ಹರಿಗೆ ಪಾಠ ಕಲಿಸಲು ನಿರ್ಧರಿಸಿದ್ದೇವೆ. ಅಥಣಿ, ಕಾಗವಾಡ ಹಾಗೂ ಗೋಕಾಕದ ನೆರೆ ಸಂತ್ರಸ್ತರು ಅವರಿಗೆ ಬುದ್ಧಿ ಕಲಿಸುತ್ತಾರೆ. ಏಕೆಂದರೆ, ಅವರು ಸಂತ್ರಸ್ತರ ನೆರವಿಗೆ ಸ್ಪಂದಿಸಿಲ್ಲ. ಹೀಗಾಗಿ, ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ದೊರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.