ADVERTISEMENT

ಗಣೇಶ ಮೂರ್ತಿ ತಯಾರಿಕೆ ತರಬೇತಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 16:45 IST
Last Updated 2 ಸೆಪ್ಟೆಂಬರ್ 2021, 16:45 IST

ಬೆಂಗಳೂರು: ಪ್ರಯೋಗ ಮಂಟಪ ಹಾಗೂ ರಂಗ ಚಂದಿರ ತಂಡಗಳ ಸಹಯೋಗದಲ್ಲಿ ಇದೇ 5ರಂದು ಜೇಡಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ.

ಹನುಮಂತನಗರದ ರಾಮಾಂಜನೇಯ ಗುಡ್ಡದಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ನುರಿತ ಕಲಾವಿದರು ಗಣೇಶ ವಿಗ್ರಹ ತಯಾರಿಕೆ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಭಾಗವಹಿಸುವವರಿಗೆ ಜೇಡಿಮಣ್ಣು ಹಾಗೂ ಅಡಿಕೆ ತಟ್ಟೆಗಳನ್ನು ಕೊಡಲಾಗುತ್ತದೆ. ತಯಾರಿಸಿದ ಗಣೇಶ ಮೂರ್ತಿಗಳನ್ನು ಮನೆಗೆ ಕೊಂಡೊಯ್ಯುವ ಅವಕಾಶವೂ ಇದೆ. ಇದರ ಜೊತೆಗೆ ಪ್ರಶಸ್ತಿ ಪತ್ರ ಹಾಗೂ ಲಾಡು ಪ್ರಸಾದವನ್ನೂ ನೀಡಲಾಗುತ್ತದೆ.

ಆಸಕ್ತರು ವೆಂಕಟೇಶ ಜೋಶಿ (9845821847) ಹಾಗೂ ಜಿಪಿಒ ಚಂದ್ರು (9113081894) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.