ADVERTISEMENT

ಆರ್‌ಬಿಐ ನಿರ್ಬಂಧ: ಇಂದು ಸಭೆ

ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 20:24 IST
Last Updated 12 ಜನವರಿ 2020, 20:24 IST

ಬೆಂಗಳೂರು: ‘ಠೇವಣಿದಾರರು ತಮ್ಮ ಖಾತೆಯಿಂದ ಹಣ ವಾಪಸು ಪಡೆಯುವುದಕ್ಕೆ ನಿರ್ಬಂಧ ಹೇರಿರುವ ಕುರಿತಂತೆ‌ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಗ್ರಾಹಕರಿಗೆ ಮಾಹಿತಿ ನೀಡಲಾಗುವುದು' ಬಸವನಗುಡಿಯಲ್ಲಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಮುಖ್ಯ ಸಲಹೆಗಾರರು ತಿಳಿಸಿದರು.

‘ಬ್ಯಾಂಕಿನ ಠೇವಣಿದಾರರು ಮತ್ತು ಸದಸ್ಯರ ಸಭೆ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಗಣೇಶನ ಗುಡಿ ಪಕ್ಕದಲ್ಲಿರುವ ದ್ವಾರಕ ಭವನದಲ್ಲಿ ಸೋಮವಾರ (ಡಿ. 13) ಸಂಜೆ 6 ಗಂಟೆಗೆ ನಡೆಯಲಿದೆ. ಗ್ರಾಹಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ’ ಎಂದೂ ಹೇಳಿದರು.

ವಹಿವಾಟು ನಡೆಸುವ ಕುರಿತಂತೆ ಕೆಲವು ನಿರ್ಬಂಧಗಳನ್ನು ವಿಧಿಸಿ ಬ್ಯಾಂಕಿಗೆ ಆರ್‌ಬಿಐ ಇದೇ 10ರಂದು ನೋಟಿಸ್‌ ನೀಡಿತ್ತು. ಈ ನೋಟಿಸ್ ಅನ್ನು ಆಡಳಿತ ಮಂಡಳಿ, ಬ್ಯಾಂಕಿನ ಗೋಡೆಯಲ್ಲಿ ಅಂಟಿಸುವ ಜೊತೆಗೆ, ಗ್ರಾಹಕರ ಮೊಬೈಲ್‌ಗಳಿಗೆ ಸಂದೇಶ ಕಳುಹಿಸಿತ್ತು.

ADVERTISEMENT

ಗ್ರಾಹಕರ ಹಣ ಭದ್ರವಾಗಿದೆ. ಸಾಲ ಪಡೆದವರೂ ಸಹ ಪ್ರಾಮಾಣಿಕವಾಗಿ ಹಿಂದಿರುಗಿಸುತ್ತೇವೆಂದು ತಿಳಿಸಿದ್ದಾರೆ ಕೆ. ರಾಮಕೃಷ್ಣ, ಅಧ್ಯಕ್ಷ, ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.