ADVERTISEMENT

ಬೈಕ್‌ ಹಿಂದಿಕ್ಕಿದಕ್ಕೆ ಥಳಿತ, ಜಾತಿ ನಿಂದನೆ: ಎಸ್‌.ಸಿ ಯುವಕ ಆತ್ಮಹತ್ಯೆ

ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 19:43 IST
Last Updated 1 ಡಿಸೆಂಬರ್ 2022, 19:43 IST
ಉದಯ್ ಕಿರಣ್
ಉದಯ್ ಕಿರಣ್   

ನಂಗಲಿ (ಕೋಲಾರ ಜಿಲ್ಲೆ): ಬೈಕ್‌ ಹಿಂದಿಕ್ಕಿದ ಪರಿಶಿಷ್ಟ ಜಾತಿಯ(ಎಸ್‌.ಸಿ)ಉದಯ್‌ ಕಿರಣ್‌ (25) ಎಂಬ ಯುವಕನನ್ನು ಒಕ್ಕಲಿಗ ಸಮುದಾಯದ ನಾಲ್ವರುಪೆತ್ತಾಂಡ್ಲಹಳ್ಳಿ ಗ್ರಾಮದಲ್ಲಿ ಬುಧವಾರ ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಇದರಿಂದ ಮನನೊಂದ ಆತ ಬೇವಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೆತ್ತಾಂಡ್ಲಹಳ್ಳಿಯ ರಾಜು, ಶಿವರಾಜ್‌, ಗೋಪಾಲಕೃಷ್ಣಪ್ಪ ಹಾಗೂ ಮುನಿವೆಂಕಟಪ್ಪ ವಿರುದ್ಧ ಮೃತನ ಮಾವ ಬಿ.ಎಚ್‌. ನಾಗರಾಜ್‌ ಗುರುವಾರ ನಂಗಲಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆರೋಪಿಗಳೆಲ್ಲರೂ ಸಂಬಂಧಿಗಳಾಗಿದ್ದು,ತಲೆ ಮರೆಸಿಕೊಂಡಿದ್ದಾರೆ. ಅವರ ವಿರುದ್ಧ ದೌರ್ಜನ್ಯ, ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.

ADVERTISEMENT

‘ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಸಬ್‌ ಇನ್‌ಸ್ಪೆಕ್ಟರ್ ಪ್ರದೀಪ್ ಸಿಂಗ್ ತಿಳಿಸಿದ್ದಾರೆ.

‘ಬೈಕ್‌ ಹಿಂದಿಕ್ಕಿದ ಕಾರಣ ಜಗಳ ತೆಗೆದ ಆರೋಪಿಗಳು ಹಲ್ಲೆ ನಡೆಸಿ ಉದಯ್‌ನ ಬೈಕ್‌ಮತ್ತು ಮೊಬೈಲ್‌ ಕಿತ್ತುಕೊಂಡು ಹೋಗಿದ್ದರು. ಅವನ್ನು ವಾಪಸ್ ಕೇಳಲು ಆತ ಪೆತ್ತಾಂಡ್ಲಹಳ್ಳಿಗೆ ಹೋಗಿದ್ದ. ಈ ಸಂದರ್ಭದಲ್ಲಿಆರೋಪಿಗಳು ಆತ ನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿ, ಜಾತಿ ನಿಂದನೆ ಮಾಡಿದ್ದರು’
ಎಂದು ಮೃತನ ಮಾವ ದೂರಿನಲ್ಲಿ ತಿಳಿಸಿದ್ದಾರೆ.

ಮೂಲತಃ ಎಚ್‌. ಬೈಯಪ್ಪನಹಳ್ಳಿ ಗ್ರಾಮದ ಈ ಯುವಕ ಬೇವಹಳ್ಳಿಯ ಮಾವನ ಮನೆಯಲ್ಲಿ ವ್ಯವಸಾಯ ಮಾಡಿ ಕೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.