ADVERTISEMENT

ತೋಂಟದಾರ್ಯ ಮಠದ ನೂತನ ಪೀಠಾಧಿಪತಿಯಾಗಿ ಡಾ. ಸಿದ್ದರಾಮ ಸ್ವಾಮೀಜಿ ಪದಗ್ರಹಣ

20ನೇ ಪೀಠಾಧಿಪತಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 4:52 IST
Last Updated 29 ಅಕ್ಟೋಬರ್ 2018, 4:52 IST
   

ಗದಗ: ತೋಂಟದಾರ್ಯ ಮಠದ 20ನೇ ಪೀಠಾಧಿಕಾರಿಯಾಗಿ ಡಾ. ಸಿದ್ದರಾಮ ಸ್ವಾಮೀಜಿ ಅವರು ಸೋಮವಾರ ಪದಗ್ರಹಣ ಮಾಡಿದರು.

ವಿವಿಧ ಮಠಾಧೀಶರಿಂದ ಮೊಳಗಿದ ವಚನ, ಪಠಣ, ಜಯಘೋಷಗಳು ಮಠದಲ್ಲಿ ಸಂಭ್ರಮ ಹೆಚ್ಚಿಸಿತ್ತು.

ವಾದ್ಯ ಮೇಳಗಳ ವೈಭವದೊಂದಿಗೆ ಪೀಠ ಏರಿದ ನೂತನ ಶ್ರೀ.ಡಾ. ಸಿದ್ದರಾಮ ಸ್ವಾಮೀಜಿ ಅವರಿಗೆ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಎಂದು ಮರು ನಾಮಕರಣ ಮಾಡಲಾಯಿತು. ಹುಬ್ಬಳ್ಳಿಯ ಮೂಜಗು ಶ್ರೀ ಗಳು ನಾಮಕರಣದ ವಿಧಿ ಬೋಧಿಸಿದರು.

ADVERTISEMENT

ಈ ವೇಳೆ ಶಾಸಕ ಎಚ್.ಕೆ. ಪಾಟೀಲ, ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.