ADVERTISEMENT

ಸಿದ್ದರಾಮಯ್ಯ ನನ್ನನ್ನೇನು ಮಂತ್ರಿ ಮಾಡಿಲ್ಲ, ನನಗೂ ಸ್ವಾಭಿಮಾನ ಇದೆ: ಮಾಧುಸ್ವಾಮಿ

ಸಿಟ್ಟು ಬಂದಾಗ ಮಾತನಾಡಿದ್ದೇನೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 7:11 IST
Last Updated 21 ಮೇ 2020, 7:11 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ   

ತುಮಕೂರು: ನನಗೂ ಸ್ವಾಭಿಮಾನ ಇದೆ. ಸಿಟ್ಟು ಬಂದಾಗ ಮಾತನಾಡಿದ್ದೇನೆ‌. ಆದರೆ ಆಕೆಯ ವರ್ತನೆಯ ಬಗ್ಗೆಯೂ ಆಲೋಚಿಸಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ರಾಸ್ಕಲ್ ಎಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಡೀ ಹೆಣ್ಣು ಮಕ್ಕಳ ಭಾವನೆಗೆ ನೋವು ಆಗಿದ್ದರೆ ಕ್ಷಮೆ ಕೋರುವೆ. ಆದರೆ ಆ ಹೆಣ್ಣು ಮಗಳು ಪದೇ ಪದೇ ಅನಗತ್ಯವಾಗಿ ಮಾತನಾಡುತ್ತಿದ್ದಳು‌. ನಾನು ಬೈದ ಮೇಲೆ ಅಣ್ಣ ಅಂದಿದ್ದು‌. ಅದಕ್ಕೂ ಮುನ್ನ ಅವರ ವರ್ತನೆ ಉದ್ದಟತನವಾಗಿತ್ತು ಎಂದರು‌.

ಸಿದ್ದರಾಮಯ್ಯ ನನ್ನನ್ನೇನು ಮಂತ್ರಿ ಮಾಡಿಲ್ಲ. ನನಗೂ ಸ್ವಾಭಿಮಾನ ಇದೆ. ನಮ್ಮ ಪಕ್ಷದ ನಾಯಕರು ಸಚಿವ ಸ್ಥಾನ ಬಿಡಿ ಅಂದರೆ ಒಂದು ಕ್ಷಣವೂ ಇರುವುದಿಲ್ಲ ಎಂದರು‌.

ADVERTISEMENT

ಒಬ್ಬ ಮಂತ್ರಿಯಾಗಿ ಆ ಮಟ್ಟಕ್ಕೆ ಮಾತನಾಡುತ್ತೇನೆ ಅಂದರೆ ಆಯಮ್ಮವ ವರ್ತನೆ ಹೇಗಿರಬೇಕು ಯೋಚಿಸಿ. ಈ ಘಟನೆನಡೆಯಬಾರದಿತ್ತು. ನನಗೂ ಬೇಸರವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.