ಮೈಸೂರು: ‘ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಒಂದು ವರ್ಷ ಆಗಿದೆ. ಈಶ್ವರಪ್ಪ ಯಾವತ್ತು ಆ ರೀತಿ ಕೇಳಿದ್ದ ಎಂಬುದನ್ನು ಮರೆತುಬಿಟ್ಟಿದ್ದೇನೆ. ಅವ ಹೇಳುವ ರೀತಿಯಲ್ಲಿ ನಾನು ಉತ್ತರ ಕೊಡಲು ಸಾಧ್ಯವೇ ಇಲ್ಲ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪಗಳಿಗೆ ಭಾನುವಾರ ಮೈಸೂರಿನಲ್ಲಿ ಈ ರೀತಿ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಒಂದು ವೇಳೆ ಹಾಗೆ ಹೇಳಿದ್ದೆ ಎಂದಿಟ್ಟುಕೊಳ್ಳೋಣ. ಈಶ್ವರಪ್ಪ ಆಮೇಲೆ ಏನು ಮಾಡಿದ? ನಾನು ಇಂತಹ ಉತ್ತರ ಕೊಟ್ಟಿದ್ದರೆ ವಿರೋಧ ಪಕ್ಷದಲ್ಲಿದ್ದುಕೊಂಡು ಅವ ಏನಾದರೂ ಮಾಡಬೇಕಿತ್ತಲ್ವಾ’ ಎಂದು ತಿರುಗೇಟು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.