ADVERTISEMENT

ಮಾಧ್ಯಮ ಪ್ರತಿನಿಧಿ ವಿರುದ್ಧ ಗರಂ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 17:47 IST
Last Updated 6 ಜುಲೈ 2019, 17:47 IST

ಬೆಂಗಳೂರು: ಶಾಸಕರ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮದ ಮಹಿಳಾ ಪ್ರತಿನಿಧಿಯೊಬ್ಬರ ವಿರುದ್ಧಸ್ಪೀಕರ್ ರಮೇಶ್‌ಕುಮಾರ್ ಗರಂ ಆದರು.

ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿ ಸಲುಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದ ರಮೇಶ್‌ಕುಮಾರ್ ಅವರು ಕಾರಿನಿಂದ ಇಳಿದ ಕೂಡಲೇ ಪ್ರಶ್ನೆ ಕೇಳಲು ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿ ಮುಂದಾದರು.

ಲೋಗೋ ಸಹಿತ ಅವರನ್ನು ಹಿಂದಕ್ಕೆ ತಳ್ಳಿದ ರಮೇಶ್‌ಕುಮಾರ್, ‘ನಿಮಗೆ ಮನುಷ್ಯತ್ವ ಇಲ್ಲವೇ, ನಮ್ಮ ಸಂಬಂಧಿಕರೊಬ್ಬರಿಗೆ ಆರೋಗ್ಯ ಏರುಪೇರಾಗಿದೆ. ಅಲ್ಲಿ ಜನ ಸಾಯ್ತಾ ಇದ್ದಾರೆ, ನಿಮಗೆ ಸುದ್ದಿಯೇ ಮುಖ್ಯವೇ, ಮನುಷ್ಯರಾ ನೀವು, ಹೋಗಿ ಇಲ್ಲಿಂದ’ ಎಂದು ಕಿಡಿ ಕಾರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.