ADVERTISEMENT

ಗಾಂಧಿ ಕೊಂದವರ ಸಮರ್ಥನೆ ಅಪಾಯಕಾರಿ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 17 ಮೇ 2019, 7:29 IST
Last Updated 17 ಮೇ 2019, 7:29 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಹುಬ್ಬಳ್ಳಿ: ಮಹಾತಗಾಂಧಿ ಅವರನ್ನು ಕೊಂದವರನ್ನು ಸಮರ್ಥಿಸುತ್ತಿರುವುದು ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಗಾಂಧೀಜಿ ಅವರ ಹೋರಾಟವನ್ನು ವಿಶ್ವವೇ ಮೆಚ್ಚುತ್ತಿದೆ. ಮೋದಿ ಅವರು ಸೋಲಿನ ಹತಾಶೆಯಿಂದ ಟೀಕಿಸುತ್ತಿದ್ದಾರೆ ಎಂದರು.

‘ಸಂಸದ ನಳೀನ್ ಕುಮಾರ ಕಟೀಲ್‌ ಹಾಗೂ ಅನಂತಕುಮಾರ ಹೆಗಡೆ, ಗಾಂಧಿ ಕೊಂದವರನ್ನು ಸಮರ್ಥಿಸುವ ಮೂಲಕ ಅವರ ಸಂಸ್ಕೃತಿ, ಮನದಲ್ಲಿದ್ದದ್ದನ್ನು ತಿಳಿಸಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಇದೇ ವೇಳೆ ಕುಂದಗೋಳ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಬ್ಬರು ಪಕ್ಷೇತರರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.

ತುಳಜಪ್ಪ ದಾಸರ, ಸಿದ್ದಪ ಕೊಡಿ ಬೆಂಬಲ ಘೋಷಿಸಿದ್ದಾರೆ. ಇನ್ನೊಬ್ಬ ಪಕ್ಷೇತರ ಅಭ್ಯರ್ಥಿಯು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.