ADVERTISEMENT

ಪದಗ್ರಹಣ ಕುರಿತು ಮುಖ್ಯಮಂತ್ರಿ ಹೇಳಿಕೆಗೆ ಕೃತಜ್ಞತೆ ಸಲ್ಲಿಸಿದ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 9:26 IST
Last Updated 11 ಜೂನ್ 2020, 9:26 IST
ಡಿ.ಕೆ‌.ಶಿವಕುಮಾರ್
ಡಿ.ಕೆ‌.ಶಿವಕುಮಾರ್   

ಬೆಂಗಳೂರು: ತಮ್ಮ ಪದಗ್ರಹಣಕ್ಕೆ ಅಡ್ಡಿ ಇಲ್ಲ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್, ಇದೇ 14ರಂದು ಪದಗ್ರಹಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

‘ಸರ್ಕಾರದ ಆದೇಶ ಬಂದ ಕಾರಣ 14ರ ಪದಗ್ರಹಣ ಕಾರ್ಯಕ್ರಮ ರದ್ದುಪಡಿಸಲು 7,800 ಪಂಚಾಯಿತಿ ಮಟ್ಟಕ್ಕೆ ಸಂದೇಶ ರವಾನಿಸಲಾಗಿದೆ. ಮತ್ತೆ ಕಾರ್ಯಕ್ರಮ ಸಜ್ಜುಗೊಳಿಸುವುದಕ್ಕೆ ಒಂದಿಷ್ಟು ಸಮಯ ಬೇಕು. ಸಿದ್ಧತೆ ತಕ್ಷಣದಿಂದ ಪುನರಾರಂಭಗೊಳ್ಳಲಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ದಿನಾಂಕವನ್ನು ಶೀಘ್ರ ಪ್ರಕಟಿಸಲಿದ್ದೇನೆ’ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯಮಂತ್ರಿ ಅವರೇ ಜಗತ್ತಿಗೆ ತಿಳಿಯುವ ರೀತಿಯಲ್ಲಿ ಮಾಧ್ಯಮದಲ್ಲಿ ಹೇಳಿದ ಬಳಿಕ ಬೇರೆ ಆದೇಶದ ಅಗತ್ಯ ಇಲ್ಲ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.