ADVERTISEMENT

ಶಿಕ್ಷಕರ ಪ್ರಶಸ್ತಿ: ಇಬ್ಬರು ಪ್ರಾಂಶುಪಾಲರು, 8 ಉಪನ್ಯಾಸಕರು ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 19:31 IST
Last Updated 3 ಸೆಪ್ಟೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪದವಿಪೂರ್ವ ಕಾಲೇಜಿನ ಇಬ್ಬರು ಪ್ರಾಂಶುಪಾಲರು, ಎಂಟು ಉಪನ್ಯಾಸಕರು 2022–23ನೇ ಸಾಲಿನ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಿ.ನಾಗಣ್ಣ, ಪ್ರಾಂಶುಪಾಲ, ಬಾಲಕಿಯರ ಸರ್ಕಾರಿ ಪಿಯು ಕಾಲೇಜ್, ಬಸವನಗುಡಿ. ಸತೀಶ್‌ ಬೊಮ್ಮಯ್ಯ ನಾಯಕ್‌, ಪ್ರಾಂಶುಪಾಲ, ನೆಲ್ಲಿಕೆರೆ ಎಚ್‌.ಬೆಣ್ಣೆ ಸರ್ಕಾರಿ ಪಿಯು ಕಾಲೇಜ್,ಕುಮಟಾ, ಉತ್ತರ ಕನ್ನಡ ಜಿಲ್ಲೆ.

ಉಪನ್ಯಾಸಕರು: ಆರ್‌.ಬಿ.ಚಂದ್ರಶೇಖರ್, ಎಂಪ್ರೆಸ್‌ ಬಾಲಕಿಯರ ಪಿಯು ಕಾಲೇಜ್, ತುಮಕೂರು. ಎಂ.ಎನ್‌.ಉಮೇಶ್‌, ಸರ್ಕಾರಿ ಪಿಯು ಕಾಲೇಜ್, ಯಲಹಂಕ. ಮಹಾವೀರ್ ಸಿಂಗ್ ಬಿ ರಜಪೂತ್‌, ಬಾಲಕಿಯರ ಕಾಲೇಜ್, ವಿಜಯಪುರ. ಕೆ.ಮಲ್ಲಮ್ಮ, ಹಲಸೂರು ಎಸ್‌ಕೆಪಿಎಸ್‌ ಸ್ವತಂತ್ರ ಪಿಯು ಕಾಲೇಜ್, ಬಸವಕಲ್ಯಾಣ, ಬೀದರ್‌. ಶಿವಾನಂದ ಎಂ.ಕಲ್ಲೂರು, ಸಿದ್ಧಲಿಂಗ ಸರ್ಕಾರಿ ಪಿಯು ಕಾಲೇಜ್, ಗದಗ. ಶ್ರೀಶೈಲ ಕೋಲಾರ, ಕೆರೂರು ಕಾಲೇಜ್, ಚಿಕ್ಕೋಡಿ. ಎಂ.ಪಿ.ಉದಯ್‌ಕುಮಾರ್, ಸರ್ಕಾರಿ ಪಿಯು ಕಾಲೇಜ್, ಬೈಂದೂರು, ಉಡುಪಿ. ಆರ್‌.ಸದಾನಂದ, ಬಾಲಕಿಯರ ಕಾಲೇಜ್, ಹುಣಸೂರು, ಮೈಸೂರು.

ADVERTISEMENT

ಸೆ.5ರಂದು ಅವರನ್ನು ಪುರಸ್ಕರಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.