ADVERTISEMENT

31 ಮಂದಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 19:31 IST
Last Updated 2 ಸೆಪ್ಟೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 2022–23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ಶಾಲೆಗಳ 20 ಮತ್ತು ಪ್ರೌಢಶಾಲೆಗಳ 11 ಶಿಕ್ಷಕರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

ಪ್ರಶಸ್ತಿ ತಲಾ ₹10 ಸಾವಿರ ನಗದು ಒಳಗೊಂಡಿದೆ. ಆಯ್ಕೆಯಾಗಿರುವ ಶಿಕ್ಷಕಿ ಯರಿಗೆ ‘ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ’ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಪ್ರಾಥಮಿಕ ಶಾಲಾ ವಿಭಾಗ: ಮಂಜುನಾಥ ಶಂಕರಪ್ಪ ಮಂಗೂಣಿ (ಬೆನ್ನೂರ, ನವಲಗುಂದ), ಅಮಿತಾನಂದ ಹೆಗ್ಡೆ (ಬಂಗಾಡಿ, ಬೆಳ್ತಂಗಡಿ), ಚಂದ್ರಶೇಖರ ಎಚ್‌.ಎಲ್. (ರಾಗಿಮಾಕಲಹಳ್ಳಿ, ಚಿಕ್ಕ ಬಳ್ಳಾಪುರ), ಅಪ್ಪಸಾಹೇಬ ವಸಂ ತಪ್ಪ ಗಿರೆಣ್ಣವರ (ತುಕ್ಕಾ ನಟ್ಟಿ, ಮೂಡಲಗಿ), ಶಿವಾ ನಂದಪ್ಪ ಬಿ.(ಹರಗುವಳ್ಳಿ, ಶಿಕಾರಿಪುರ), ಹುಸೇನಸಾಬ್ (ಬಸನಾಳ, ಕಲ ಬುರಗಿ), ಸುದರ್ಶನ್ ಕೆ.ವಿ.(ಕ್ಲೀವ್ ಲ್ಯಾಂಡ್ ಟೌನ್, ಬೆಂಗಳೂರು ಉತ್ತರ–3), ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಕುರಿ (ಹಂದಿಗನೂರು, ಹಾವೇರಿ), ಸಂಜೀವ ದೇವಾಡಿಗ(ಮಿಯೂರು ಬಂಗ್ಲೆಗುಡ್ಡೆ, ಕಾರ್ಕಳ), ಫಿರೆಂಗಪ್ಪ ಸಿದ್ದಪ್ಪ ಕಟ್ಟಿಮನಿ(ತೊದಲಬಾಗಿ, ಜಮಖಂಡಿ), ಚಂದ್ರಕಲಾ(ಹಾಲಭಾವಿ, ಶಹಾಪುರ), ನಿರಂಜನ ಪಿ.ಜೆ.(76 ವೆಂಕಟಾಪುರ ಕ್ಯಾಂಪ್, ಹೊಸಪೇಟೆ), ಸುಶೀಲಾಬಾಯಿ ಲಕ್ಷ್ಮೀಕಾಂತ್ ಗುರುವ(ವಡಗಾವಿ, ಬೆಳಗಾವಿ), ವಿದ್ಯಾ ಕಂಪಾಪೂರ ಮಠ (ನೆರೆಬೆಂಚಿ, ಕುಷ್ಟಗಿ), ಬಸವರಾಜ ಜಾಡರ (ಮುಳ್ಳೂರು, ಸಿಂಧನೂರು), ಗಂಗಾಧರಪ್ಪ ಬಿ.ಆರ್.(ಮೆಣಸೆ, ಶೃಂಗೇರಿ), ಚಂದ್ರಶೇಖರರೆಡ್ಡಿ(ಕೆ.ರಾಂಪುರ, ಪಾವಗಡ), ಸುಧಾಕರ ಗಣಪತಿ ನಾಯಕ(ಕಂಚನಹಳ್ಳಿ, ಯಲ್ಲಾಪುರ), ಈಶ್ವರಪ್ಪ ಅಂದಾನಪ್ಪ ರೇವಡಿ(ಹಿರೇಕೊಪ್ಪ, ರೋಣ), ಕವಿತಾ ಈ.(ಬೋರಪ್ಪನಗುಡಿ, ಚಳ್ಳಕೆರೆ).

ADVERTISEMENT

ಪ್ರೌಢಶಾಲೆ : ಮಹೇಶ್ ಕೆ.ಎನ್.(ಕಡ್ಲೇಗುದ್ದು, ಚಿತ್ರದುರ್ಗ), ಇಬ್ರಾಹಿಂ ಎಸ್.ಎಂ.(ನೇರುಗಳಲೆ, ಸೋಮವಾ ರಪೇಟೆ), ರಘು ಬಿ.ಎಂ.(ಶಿವಮೊಗ್ಗ), ಭೀಮಪ್ಪ(ಮಸ್ಕಿ, ರಾಯಚೂರು), ರಾಧಾಕೃಷ್ಣ ಟಿ. (ಕೊಯ್ಯೂರು, ಬೆಳ್ತಂಗಡಿ), ನಾರಾಯಣ ಪರಮೇಶ್ವರ ಭಾಗವತ(ಶಿರಸಿ), ಅರುಣಾ ಜೂಡಿ(ಕಿನ್ನಾಳ, ಕೊಪ್ಪಳ), ಸುನೀಲ ಪರೀಟ(ಲಕ್ಕುಂಡಿ, ಬೈಲಹೊಂಗಲ), ಬಾಲಸುಬ್ರಹ್ಮಣ್ಯ ಎಸ್.ಟಿ.(ಕೊಕ್ಕರೆ ಬೆಳ್ಳೂರು, ಮದ್ದೂರು), ಚೇತನ ಬಣಕಾರ (ಹರಪನಹಳ್ಳಿ, ವಿಜಯನಗರ), ಕೀರ್ತಿ ಬಸಪ್ಪ ಲಗಳಿ(ಮಿಟ್ಟೇಮರಿ, ಬಾಗೇಪಲ್ಲಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.