ADVERTISEMENT

ಕೂಡಿಟ್ಟ ಹಣವನ್ನು ಪಿಎಂ ಕೇರ್ಸ್‌ಗೆ ದೇಣಿಗೆ ನೀಡಿದ ಬಾಲಕಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 15:51 IST
Last Updated 28 ಏಪ್ರಿಲ್ 2020, 15:51 IST
   

ವಿಜಯಪುರ: ಇಂಡಿ ತಾಲ್ಲೂಕಿನ ಭತಗುಣಕಿ ಗ್ರಾಮದ ಏಳು ವರ್ಷದ ಬಾಲಕಿ ಶ್ರೇಯಾ ದುದಗಿ ತಾನು ಕೂಡಿಟ್ಟಿದ್ದ ಹಣವನ್ನು ಕೋವಿಡ್‌ 19 ಪಿಎಂ ಕೇರ್ಸ್‌ಗೆ ನೀಡುವ ಮೂಲಕ ಗಮನ ಸೆಳೆದಿದ್ದಾಳೆ.

ತನ್ನ ತಂದೆ, ತಾಯಿ ಸೇರಿದಂತೆ ಅವರಿವರು ನೀಡಿದ್ದ ಚಿಲ್ಲರೆ ಹಣವನ್ನು ಸಂಗ್ರಹಿಸಿಟ್ಟಿದ್ದ ಶ್ರೇಯಾ ಕೊರೊನಾ ಸೋಂಕಿನಿಂದ ಸಂಕಷ್ಟರಾದವರಿಗೆ ನೀಡಬೇಕು ಎಂದು ತನ್ನ ಪಾಲಕರಿಗೆ ತಿಳಿಸಿದ್ದಾಳೆ.

ಒಂದು ವರ್ಷದಿಂದ ಅವಳು ಕೂಡಿಟ್ಟಿದ್ದ ₹ 1435 ಅನ್ನು ಮಂಗಳವಾರ ಪಿಎಂ ಕೇರ್ಸ್‌ಗೆ ಪೋಷಕರ ಸಮ್ಮುಖದಲ್ಲಿ ಭತಗುಣಕಿಯ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ನಿಂದ ಹಣ ಜಮೆ ಮಾಡಿದಳು.

ADVERTISEMENT

ಬಾಲಕಿಯ ಕಾಳಜಿ ಮತ್ತು ನಿಲುವಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.