ADVERTISEMENT

ಜೆಡಿಎಸ್ ಸಮಾವೇಶ: ಅರ್ಧದಲ್ಲೇ ನಾಡಗೀತೆ ಮೊಟಕು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 7:05 IST
Last Updated 14 ಫೆಬ್ರುವರಿ 2021, 7:05 IST
ಜೆಡಿಎಸ್‌ ಪಕ್ಷದ ನಾಯಕರು
ಜೆಡಿಎಸ್‌ ಪಕ್ಷದ ನಾಯಕರು   

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಜೆಡಿಎಸ್ ಪಕ್ಷ ಸಂಘಟನಾ ಸಮಾವೇಶ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ನಾಡಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ನಡೆಯಿತು.

ಸಮಾವೇಶ ಉದ್ಘಾಟನಾ ಸಮಾರಂಭದ‌ ಆರಂಭದಲ್ಲಿ ನಾಡ ಗೀತೆಯ ಧ್ವನಿಮುದ್ರಣವನ್ನು ಪ್ಲೇ ಮಾಡಲಾಯಿತು. ನಾಲ್ಕೇ ಸಾಲುಗಳ ಗಾಯನವಾಗುತ್ತಿದ್ದಂತೆ ನಾಡ ಗೀತೆ ಮೊಟಕುಗೊಂಡಿತು.

ನಾಡ ಗೀತೆ ಅರ್ಧಕ್ಕೆ ಮೊಟಕುಗೊಂಡಿರುವುದನ್ನು ಕಂಡು ಸಭಾಂಗಣದಲ್ಲಿದ್ದವರು ಗಲಿಬಿಲಿಗೊಂಡರು. ನಾಡ ಗೀತೆಯನ್ನು ಬಿಟ್ಟು ಕಾರ್ಯಕ್ರಮ ಮುಂದುವರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.