ADVERTISEMENT

ನೋಡಿ: ಬೆಂಗಳೂರಿನಿಂದ ಊರಿನತ್ತ ತೆರಳಿದ ಸಾವಿರಾರು ಜನರು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 12:56 IST
Last Updated 28 ಏಪ್ರಿಲ್ 2021, 12:56 IST

ಬೆಂಗಳೂರು: ರಾಜಧಾನಿಗೆ ಉದ್ಯೋಗ ಅರಸಿ ಬಂದಿದ್ದ ಸಾವಿರಾರು ಮಂದಿ ಬುಧವಾರವೂ ತಮ್ಮೂರಿನತ್ತ ತಂಡೋಪ ತಂಡವಾಗಿ ಗುಳೆ ಹೋಗಿದ್ದಾರೆ. ‘ಮಂಗಳವಾರ ರಾತ್ರಿಯಿಂದಲೇ ರಾಜ್ಯದಾದ್ಯಂತ ಕರ್ಫ್ಯೂ’ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಮಧ್ಯಾಹ್ನದಿಂದಲೇ ಜನರು ತಮ್ಮೂರಿನತ್ತ ಹೊರಟರು. ಲಾಕ್‌ಡೌನ್‌ ಹಿನ್ನೆಲೆ ಬಾಗಲಕೋಟೆ, ಶಿವಮೊಗ್ಗ ಹುಬ್ಬಳ್ಳಿ–ಧಾರವಾಡ, ರಾಯಚೂರು ಜಿಲ್ಲೆಯಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ‌ ಎನ್ನುತ್ತಿರುವ ದೃಶ್ಯಗಳ ಹಲವೆಡೆ ಕಂಡು ಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.