ADVERTISEMENT

ಶಿರಾ ಬಳಿ ಕೆರೆಗೆ ಕಾರು ಬಿದ್ದು ಒಂದೇ ಕುಟುಂಬದ ಮೂವರು ಸಾವು

ಶಿರಾ ತಾಲ್ಲೂಕಿನ ರಾಮಲಿಂಗಾಪುರದ ಕೆರೆಯಲ್ಲಿ ದುರ್ಘಟನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2023, 5:20 IST
Last Updated 29 ಅಕ್ಟೋಬರ್ 2023, 5:20 IST
<div class="paragraphs"><p>ಸಾವು (ಪ್ರಾತಿನಿಧಿಕ ಚಿತ್ರ)</p></div>

ಸಾವು (ಪ್ರಾತಿನಿಧಿಕ ಚಿತ್ರ)

   

ಶಿರಾ: ತಾಲ್ಲೂಕಿನ ರಾಮಲಿಂಗಾಪುರದ ಕೆರೆಗೆ ಭಾನುವಾರ ಬೆಳಗಿನ ಜಾವ ಕಾರು ಉರುಳಿ ಬಿದ್ದು ಒಂದೇ ಕುಟುಂಬದ ಮೂರು ಜನ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಮೇಕೆರಹಳ್ಳಿ ಗ್ರಾಮದ ಪ್ರವೀಣ್ ಮತ್ತು ಕುಟುಂಬದವರು ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಪ್ರವೀಣ್ ಪತ್ನಿ ಯಮುನಾ (25), ಮಾವ ದೊಡ್ಡಣ್ಣ(38), ಅತ್ತೆ ಚಿಕ್ಕಮ್ಮ (35) ಮೃತರು. ಪ್ರವೀಣ್ ಈಜಿ ದಡ ಸೇರಿದ್ದಾರೆ.

ADVERTISEMENT

ಸಾಕ್ಷಿಹಳ್ಳಿ ಮಣ್ಣಮ್ಮ ದೇವಿಗೆ ಪೂಜೆ ಸಲ್ಲಿಸಿ ಹೋಗುವಾಗ ಯಮುನಾ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಏರಿ ಮೇಲಿಂದ ಕೆರೆಗೆ ಉರುಳಿದೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.