ADVERTISEMENT

ಜಿಂಕೆ ಚರ್ಮ ಮಾರಾಟ ಯತ್ನ; ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 19:09 IST
Last Updated 20 ಮಾರ್ಚ್ 2019, 19:09 IST
ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದೆ
ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದೆ   

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕೆ.ಎಡತೊರೆ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸಿದ ತಾಲ್ಲೂಕಿನ ಕಾರಾಪುರ ಗ್ರಾಮದ ಶ್ರೀನಿವಾಸ (27) ಎಂಬಾತನನ್ನು ಮೈಸೂರು ಅರಣ್ಯ ಸಂಚಾರ ದಳ ಹಾಗೂ ವಿರಾಜಪೇಟೆ ಅರಣ್ಯ ಸಂಚಾರ ದಳದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಶ್ರೀನಿವಾಸ ಬಳಿ ಜಿಂಕೆ ಚರ್ಮ ಇದೆ ಎಂಬ ವಿಷಯ ತಿಳಿದ ಅಧಿಕಾರಿಗಳು ಖರೀದಿದಾರರಂತೆ ನಟಿಸಿ ಮಾರಮ್ಮ ದೇವಸ್ಥಾನದ ಬಳಿ ಬರುವಂತೆ ಹೇಳಿದ್ದಾರೆ. ಚರ್ಮದೊಂದಿಗೆ ಬಂದ ಆರೋಪಿಯನ್ನು ಬಂಧಿಸುವ ವೇಳೆ ಜತೆಯಲ್ಲಿದ್ದ ಪ್ರಸನ್ನ ಎಂಬಾತ ಪರಾರಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT