ADVERTISEMENT

ಸಿದ್ಧಗಂಗಾಮಠ: ವಸತಿ ಶಾಲೆ ಪ್ರವೇಶಕ್ಕೆ ಪೋಷಕರು, ಮಕ್ಕಳ ಜಂಗುಳಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 10:23 IST
Last Updated 2 ಜೂನ್ 2019, 10:23 IST
   

ತುಮಕೂರು: ಸಿದ್ದಗಂಗಾಮಠದ ವಸತಿ ಶಾಲೆಯ ವಿವಿಧ ತರಗತಿ ಪ್ರವೇಶಕ್ಕೆ ಅರ್ಜಿ ಪಡೆದ ಸಾವಿರಾರು ಪೋಷಕರು ಮಕ್ಕಳೊಂದಿಗೆ ಭಾನುವಾರ ಮಠದಲ್ಲಿ ನಡೆದ ಪ್ರವೇಶ ಪೂರ್ವ ಸಂದರ್ಶನಕ್ಕೆ ಹಾಜರಾಗಿದ್ದರು.

ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಅವರೇ ಮಕ್ಕಳು ಮತ್ತು ಪೋಷಕರ ಸಂದರ್ಶನ ನಡೆಸುತ್ತಾರೆ. ಭಾನುವಾರ ರಾಜ್ಯದ ವಿವಿಧ ಕಡೆಯ ಪೋಷಕರು ಪ್ರವೇಶಕ್ಕೆ ಮಕ್ಕಳನ್ನು ಕರೆ ತಂದಿದ್ದರು.

ಸ್ವಾಮೀಜಿ ಅವರ ಆಡಳಿತ ಕೊಠಡಿ ಮುಂಭಾಗದ ಆವರಣದಲ್ಲಿ ಸಾಲುಗಟ್ಟಿ ನಿಂತಿದ್ದರು.ಸುಡುಬಿಸಿಲಲ್ಲೇ ಗಂಟೆಗಟ್ಟಲೆ ಕಾದು ನಿಂತಿದ್ದರು. ಭಾನುವಾರ ಮಠದ ಆವರಣ ಪೋಷಕರು, ಮಕ್ಕಳಿಂದ ತುಂಬಿತ್ತು.

ADVERTISEMENT

ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಈ ಬಾರಿ ವಿದ್ಯಾರ್ಥಿ ಪ್ರವೇಶ ಕಡಿಮೆ ಮಾಡಿದ್ದು, ಎಂಟುವರೆ ಸಾವಿರ ಅರ್ಜಿ ವಿತರಿಸಿ ಸ್ಥಗಿತ ಮಾಡಲಾಗಿದೆ ಎಂದು ಹದಿನೈದು ದಿನಗಳ ಹಿಂದೆಯೇ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಹೇಳಿದ್ದರು.

ಆದಾಗ್ಯೂ ಮಠದ ವಸತಿ ಶಾಲೆಗೆ ಪ್ರವೇಶ ಕೋರಿ ಪೋಷಕರು, ಮಕ್ಕಳು ಬರುತ್ತಲೇ ಇದ್ದಾರೆ. ದೂರವಾಣಿ ಮೂಲಕ ವಿಚಾರಿಸುತ್ತಿದ್ದಾರೆ.

ಸಿದ್ಧಗಂಗಾಮಠದ ವಸತಿ ಶಾಲೆ ಪ್ರವೇಶ ಪೂರ್ವ ಸಂದರ್ಶನಕ್ಕೆ ಭಾನುವಾರ ಬಂದ ಪೋಷಕರು ಮತ್ತು ಮಕ್ಕಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.