ADVERTISEMENT

11 ಕೆರೆಗಳಿಗೆ ತುಂಗಭದ್ರಾ ನೀರು: ರೈತರ ಮುಖದಲ್ಲಿ ಮಂದಹಾಸ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2023, 16:05 IST
Last Updated 8 ಆಗಸ್ಟ್ 2023, 16:05 IST

ಜಗಳೂರು ತಾಲ್ಲೂಕಿನ 51 ಹಾಗೂ ಹರಪನಹಳ್ಳಿ ತಾಲ್ಲೂಕಿನ 6 ಕೆರೆಗಳಿಗೆ ನೀರು ಹರಿಸುವ ₹660 ಕೋಟಿ ವೆಚ್ಚದ ಯೋಜನೆಯಡಿ ಬಯಲುಸೀಮೆಯ ಕೆರೆಗಳನ್ನು ತುಂಬಿಸಲಾಗುತ್ತಿದೆ. ಹಲವು ವರ್ಷಗಳ ಬೇಡಿಕೆಯ ಫಲವಾಗಿ ಸದ್ಯ ತುಪ್ಪದಹಳ್ಳಿ, ಹಾಲೇಕಲ್ಲು, ಬಿಳಿಚೋಡು, ಮರಿಕುಂಟೆ, ಚದರಗೊಳ್ಳ, ಅಸಗೋಡು, ಕಾಟೇನಹಳ್ಳಿ, ಗೋಡೆ, ತಾರೇಹಳ್ಳಿ, ಉರ್ಲಕಟ್ಟೆ ಹಾಗೂ ಮಾದನಹಳ್ಳಿ ಕೆರೆಗಳಿಗೆ ಪೈಪ್‌ಲೈನ್‌ ಮೂಲಕ ನೀರು ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.