ADVERTISEMENT

ಬೊಮ್ಮಾಯಿ–ದೇವೇಗೌಡ ಭೇಟಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ: ಪ್ರೀತಂಗೆ ಕಾರಜೋಳ ಸಲಹೆ

ಸಚಿವ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 10:14 IST
Last Updated 9 ಆಗಸ್ಟ್ 2021, 10:14 IST
ಶಾಸಕ ಪ್ರೀತಂಗೌಡ ಮತ್ತು ಸಚಿವ ಗೋವಿಂದ ಕಾರಜೋಳ
ಶಾಸಕ ಪ್ರೀತಂಗೌಡ ಮತ್ತು ಸಚಿವ ಗೋವಿಂದ ಕಾರಜೋಳ    

ಬಾಗಲಕೋಟೆ: ‘ದೇವೇಗೌಡರು ಈ ದೇಶದ ಮಾಜಿ ಪ್ರಧಾನಿ, ಹಿರಿಯರು ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಬಂದಿರುವುದು ಅದೊಂದು ಸೌಜನ್ಯ ಅಷ್ಟೇ. ಅದು ಹೊಂದಾಣಿಕೆ ರಾಜಕಾರಣ ಅಲ್ಲ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುವಮಿತ್ರ ಪ್ರೀತಂ ಗೌಡರು ಅದನ್ನು ತಪ್ಪಾಗಿ ಅರ್ಥಮಾಡಿ ಕೊಂಡಿರಬಹುದು. ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ವಿನಂತಿಸುತ್ತೇನೆ.ಈ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಪೂರ್ಣ ಅವಧಿಗೆ ಇರಲಿದೆ‘ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT