ADVERTISEMENT

ವಿಜಯನಗರ ಶ್ರೀಕೃಷ್ಣದೇವರಾಯ ವಿವಿ: ಬೋಧಕರ ನೇಮಕಾತಿ ಸಂದರ್ಶನ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 20:09 IST
Last Updated 13 ಮಾರ್ಚ್ 2019, 20:09 IST

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಬೋಧಕರ ನೇಮಕಾತಿಗಾಗಿ ಮಂಗಳವಾರದಿಂದ ಆರಂಭಿಸಿದ್ದ ಸಂದರ್ಶನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಂದರ್ಶನ ನಡೆಸಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್‌ ಅವರ ಮೌಖಿಕ ಸೂಚನೆ ಇದ್ದರೂ ಮಂಗಳವಾರ ಸಂದರ್ಶನ ನಡೆದಿತ್ತು. ಸಂಜೆಯ ವೇಳೆಗೆ ಸಂದರ್ಶನವನ್ನು ಸ್ಥಗಿತಗೊಳಿಸಲಾಯಿತು. ಮಾ.12ರಿಂದ 15ರವರೆಗೂ ಸಂದರ್ಶನ ನಿಗದಿಯಾಗಿತ್ತು.

‘ನೀತಿ ಸಂಹಿತೆ ಇದ್ದರೂ ಸಂದರ್ಶನ ಏಕೆ ನಡೆಸಿದ್ದೀರಿ? ಆ ಬಗ್ಗೆ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಕಾರಣ ಕೇಳಿ ನೀಡಿದ್ದ ನೋಟಿಸಿಗೆ, ವಿಶ್ವವಿದ್ಯಾಲಯ ಉತ್ತರ ನೀಡಿದೆ. ಸಂದರ್ಶನ ನಿಲ್ಲಿಸಿರುವುದಾಗಿ ತಿಳಿಸಿದೆ. ಉತ್ತರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

ಚುನಾವಣೆ ಬಳಿಕ ಸಂದರ್ಶನ ನಡೆಸಲು ನಿರ್ಧರಿಸಲಾಗಿದೆ. ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಬುಧವಾರ ಕೂಡ ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.