ADVERTISEMENT

ಅಸ್ಪೃಶ್ಯನಂತೆ ಕಂಡಿದ್ದರಿಂದ ಬೇಸರ: ಸಂಸದ ನಾರಾಯಣಸ್ವಾಮಿ 

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 20:16 IST
Last Updated 17 ಸೆಪ್ಟೆಂಬರ್ 2019, 20:16 IST
   

ಚಿತ್ರದುರ್ಗ:‘ಹಟ್ಟಿ ಪ್ರವೇಶಿಸಿದ ದಲಿತರಿಗೆ ತೊಂದರೆಯಾಗುತ್ತದೆ ಎಂಬುದು ಜನರ ನಂಬಿಕೆ. ನನಗೆ ತೊಂದರೆಯಾದರೂ ಸರಿ, ಹಟ್ಟಿ ಅಭಿವೃದ್ಧಿಯಾದರೆ ಸಾಕು ಎಂದು ಮನವೊಲಿಸಲು ಪ್ರಯತ್ನಿಸಿದೆ. ಹಿಂದೆ ಇದ್ದ ಶಾಸಕ, ಸಂಸದರೂ ಸೇರಿ ಯಾವೊಬ್ಬ ರಾಜಕಾರಣಿಯೂ ಹಟ್ಟಿ ಪ್ರವೇಶಿಸುವ ಪ್ರಯತ್ನ ಮಾಡಿಲ್ಲ. ಮತಬ್ಯಾಂಕಿನ ಮೇಲಿನ ವ್ಯಾಮೋಹ ರಾಜಕಾರಣಿಗಳನ್ನು ಕಟ್ಟಿಹಾಕಿದೆ. ಸಂಸದನಾದರೂ ಅಸ್ಪೃಶ್ಯನಂತೆ ಕಂಡಿದ್ದು ಬೇಸರ ಮೂಡಿಸಿದೆ. ಮೌಢ್ಯದಿಂದ ಜನರನ್ನು ಹೊರತರಬೇಕಿದೆ. ಆದರೆ, ಇದು ಬಲವಂತವಾಗಿ ನಡೆಯಬಾರದು’ ಎಂದು ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT